ಸಿದ್ದಾಪುರ ತಾಲೂಕ ಪಂಚಾಯತ್ ನಿರ್ವಹಣಾಧಿಕಾರಿಯಾಗಿ ದೇವರಾಜ್ ಹಿತ್ಲಕೊಪ್ಪ

ಸಿದ್ದಾಪುರ : ಶಿರಸಿಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವರಾಜ್ ಹಿತ್ಲಕೊಪ್ಪ ರವರು ಸಿದ್ದಾಪುರಕ್ಕೆ ವರ್ಗಾವಣೆಗೊಂಡು ತಾ ಪಂ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡರು
ಈ ಮೊದಲು ಪ್ರಶಾಂತ್ ರಾವ್ ಅವರು ತಾಪಂ ಕಾರ್ಯ ನಿರ್ವಹಣಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ವರ್ಗಾವಣೆ ಗೊಂಡ ಹಿನ್ನಲೆ ಅವರ ಸ್ಥಾನಕ್ಕೆ ಸಿದ್ದಾಪುರ ಮೂಲದವರಾದ ದೇವರಾಜ್ ಹಿತ್ಲಕೊಪ್ಪ ರವರು ಬಂದಿದ್ದಾರೆ ಮಾಧ್ಯಮದವರೊಂದಿಗೆ ಮಾತನಾಡಿ ನಾನು ಇದೇ ತಾಲೂಕಿನವನು ಆಗಿರುವುದರಿಂದ ತಾಲೂಕನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿಯನ್ನು ಹೊಂದಿದ್ದೇನೆ ಎಲ್ಲ ಇಲಾಖೆಯ ಅಧಿಕಾರಿಗಳ, ಸಾರ್ವಜನಿಕರ ಪ್ರೀತಿ ವಿಶ್ವಾಸವನ್ನು ಪಡೆದು ತಾಲೂಕಿನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು