ಶ್ರೀ.ಶೈಲ ಜಗದ್ಗುರು ಸ್ವಾಮೀಜಿಗಳ ಶಿವಪೂಜಾನುಷ್ಠಾನ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ

ದಾಂಡೇಲಿ : ಶ್ರೀಶೈಲ ಜಗದ್ಗುರು ಮಹಾಸ್ವಾಮೀಜಿಯವರು ಜೋಯಿಡಾ ತಾಲ್ಲೂಕಿನ ಕುಂಬಾರವಾಡಾದಲ್ಲಿ ಕೈಗೊಳ್ಳಲಿರುವ ಶಿವಪೂಜಾನುಷ್ಠಾನ ಕಾರ್ಯಕ್ರಮದ ಕುರಿತಂತೆ ದಾಂಡೇಲಿ ನಗರದ ಸಮೀಪದಲ್ಲಿರುವ ಕೋಗಿಲಬನದ ಶ್ರೀ.ಮೃತ್ಯುಂಜಯ ಮಠದಲ್ಲಿ ಅಂಬಿಕಾನಗರದ ಶ್ರೀ ಶ್ರೀ ಶ್ರೀ.ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು

ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ,ಉದಯ ಹೂಲಿ, ವೀರಶೈವ ಲಿಂಗಾಯತ ಸಮಾಜದ ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕಿನ ಪ್ರಮುಖರುಗಳಾದ ಬಸವರಾಜ ಕಲಶೆಟ್ಟಿ, ಯು.ಎಸ್.ಪಾಟೀಲ್, ಗುರುಶಾಂತ ಜಡೆಹಿರೇಮಠ, ಶಿವ ದೇಸಾಯಿಸ್ವಾಮಿ, ಬಸವರಾಜ ಬೆಂಡಿಗೇರಿಮಠ, ವಿ.ಎಂ.ಹಳ್ಳಿ, ಸುನೀಲ್ ಹಿರೇಮಠ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು