ಭಟ್ಕಳ ಬ್ಲಾಕ್  ಕಾಂಗ್ರೆಸ್ ಸಮಿತಿ ವತಿಯಿಂದ ಮೌನ ಪ್ರತಿಭಟನೆ

ಭಟ್ಕಳ:   ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ  ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ದ್ವೇಷ ರಾಜಕಾರಣ ಮತ್ತು ಷಡ್ಯಂತ್ರವನ್ನು ವಿರೋಧಿಸಿ ಇಲ್ಲಿನ ಬ್ಲಾಕ್  ಕಾಂಗ್ರೆಸ್ ಕಚೇರಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಭಟ್ಕಳ ಬ್ಲಾಕ್  ಕಾಂಗ್ರೆಸ್ ಸಮಿತಿಯ  ಅಧ್ಯಕ್ಷರಾದ ವೆಂಕಟೇಶ ನಾಯ್ಕರವರು ಪ್ರತಿಭಟನೆಯ ನೇತೃತ್ವವನ್ನ ವಹಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಗೋಪಾಲ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮೂಡಭಟ್ಕಳ, ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ನಯನಾ ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯಶ್ರೀ ಮೊಗೇರ, ಸದಸ್ಯರಾದ ಸಿಂಧು ನಾಯ್ಕ, ತಾಲೂಕಾ ಕಾಂಗ್ರೆಸ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ವಿಷ್ಣು ದೇವಡಿಗ, ಸ್ಥಳೀಯ ಕಾಂಗ್ರೆಸ ಘಟಕದ ಉಪಾಧ್ಯಕ್ಷರಾದ ಗಣಪತಿ ನಾಯ್ಕ ತಲಾನ್, ಖಜಾಂಚಿ ದೇವಿದಾಸ ಆಚಾರಿ, ಭಾಸ್ಕರ ನಾಯ್ಕ ಕೈಕೀಣಿ, ಜಟ್ಟಪ್ಪ ನಾಯ್ಕ ಮುಟ್ಟಳ್ಳಿ, ತಾ.ಪಂ.ಮಾಜಿ ಸದಸ್ಯರಾದ ಮಿನಾಕ್ಷಿ ನಾಯ್ಕ, ದುರ್ಗಾದಾಸ ಮೊಗೇರ ಅಳ್ವಿಕೋಡಿ, ನಟರಾಜ ನಾಯ್ಕ ತಲಾನ್, ನಾಗೇಂದ್ರ ನಾಯ್ಕ ಬೆಳ್ಕೆ, ನಾಗರಾಜ ನಾಯ್ಕ ಮೂಡಶಿರಾಲಿ, ಸತೀಶ ನಾಯ್ಕ, ಗಣಪತಿನಾಯ್ಕ ಮೂಡಶಿರಾಲಿ, ರಾಘವೇಂದ್ರ ನಾಯ್ಕ ಮುಟ್ಟಳ್ಳಿ, ಎಬಿ ಡಿಕೋಸ್ತ ಶಿರಾಲಿ, ಕಲಾವತಿ ಪಾವಸ್ಕರ್, ಸಂದೀಪ ನಾಯ್ಕ ಮಣ್ಕುಳಿ,ನಾಗರಾಜ ಕೈಪಿಣಿ,ಮಾದೇವ ನಾಯ್ಕ ತಲಾನ್ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು