ಸಿದ್ದಾಪುರ : ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ರಾಷ್ಟ್ರಪತಿಗಳಿಂದ ಬಂಗಾರದ ಪದಕ ಸ್ವೀಕಾರ.

ಸಿದ್ದಾಪುರ : ತಾಲೂಕಿನ ವಾಜಗೋಡ ಪಂಚಾಯತ್ ವ್ಯಾಪ್ತಿಯ ಸುತ್ಲಮನೆಯ ವಿದ್ಯಾ ಅಣ್ಣಪ್ಪ ನಾಯ್ಕ್ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಬಂಗಾರದ ಪದಕ ಸ್ವೀಕರಿಸಿದ್ದಾರೆ
ಬೆಂಗಳೂರಿನ ಶ್ರೀ ಸತ್ಯಸಾಯಿ ವಿಶ್ವ ವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಪದಕ ಪ್ರಧಾನ ಮಾಡಲಾಯಿತು ಈಕೆಯ ಸಾಧನೆಗೆ ತಾಲೂಕಿನ ಗಣ್ಯರು ಸ್ನೇಹಿತರು ಸಂಬಂಧಿಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ