ಶ್ವಾನ ಪ್ರೇಮಿ ರಜನಿ ಶೆಟ್ಟಿಗೆ ಕಲ್ಲಿನಿಂದ ಹೊಡೆದ ನೆರೆಮನೆ ನಿವಾಸಿ: ಕೈಗೆ ಗಾಯ, ದೂರು ದಾಖಲು

ಮಂಗಳೂರಿನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಅವರ ಮೇಲೆ ನೆರೆಮನೆ ನಿವಾಸಿ ಮಹಿಳೆಯಿಂದ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ.

ಬೀದಿ ನಾಯಿಗಳ ವಿಚಾರವಾಗಿ ರಜನಿ ಜೊತೆ ನೆರೆಮನೆ ನಿವಾಸಿ ಮಂಜುಳಾ ಶೆಟ್ಟಿ ಪದೇ ಪದೇ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಇದೇ ವಿಚಾರವಾಗಿ ಮಂಗಳೂರು ನಗರದ ಬಲ್ಲಾಲ್ ಬಾಗ್ ಎಂಬಲ್ಲಿ ಇಂದು ಬೆಳಗ್ಗೆ ರಜನಿ ಮೇಲೆ ಹಲ್ಲೆ ಮಾಡಿದ್ದಾರೆ.

ಕಲ್ಲಿನಿಂದ ಹೊಡೆಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ವೈರಲ್​ ಆಗುತ್ತಿದೆ.

ಹಲ್ಲೆಗೊಳಗಾದ ರಜನಿ ಶೆಟ್ಟಿಯವರ ಕೈಗೆ ಗಾಯವಾಗಿದ್ದು, ಮಂಜುಳಾ ವಿರುದ್ಧ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಜನಿ ಶೆಟ್ಟಿ ಅವರು ಶ್ವಾನ ಪ್ರೀಯರಾಗಿದ್ದು, ಪ್ರತಿನಿತ್ಯ 600ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ.