ಬಿಡಾಡಿ ದನವನ್ನು ರಕ್ಷಿಸಲು ಹೋಗಿ ದ್ವಿಚಕ್ರ ವಾಹನ ಸ್ಕಿಡ್-ಸವಾರನಿಗೆ ಗಾಯ

ದಾಂಡೇಲಿ : ನಗರದ ಬರ್ಚಿ ರಸ್ತೆಯಲ್ಲಿ ಏಕಾಏಕಿ ನಡುರಸ್ತೆಗೆ ಓಡೋಡಿ ಬಂದ ಬಿಡಾಡಿ ದನವನ್ನು ರಕ್ಷಿಸಲು ಹೋಗಿ ದ್ವಿಚಕ್ರ ವಾಹನ ಸವಾರ ಸ್ಕಿಡ್ ಬಿದ್ದು, ಗಾಯ ಮಾಡಿಕೊಂಡ ಘಟನೆ ನಡೆದಿದೆ.

ನಗರದ ಬಂಗೂರನಗರದ ವೈ ಟೈಪ್ ಪ್ರದೇಶದ ನಿವಾಸಿಯಾಗಿರುವ ನಾಗರಾಜ ಎಂಬವರೆ ಬಿಡಾಡಿ ದನವನ್ನು ರಕ್ಷಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಗಾಯಗೊಂಡ ನಾಗರಾಜ ಅವರನ್ನು ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿ ಚಿಕಿತ್ಸೆಯನ್ನು ನೀಡಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ನಗರದಲ್ಲಿ ಏರುತ್ತಿರುವ ಬಿಡಾಡಿ ದನ ಕರುಗಳಿಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಪಘಾತಗಳು ನಡೆಯುವಂತಾಗಿದೆ.