‘ಆದಿಚುಂಚನಗಿರಿ ಸ್ವಾಮೀಜಿ ನನ್ನ ಗುರುಗಳು’ ಹಾವೇರಿಯಲ್ಲಿ ಜಮೀರ್ ಹೇಳಿಕೆ

ಹಾವೇರಿ: ಸಿಟಿ ರವಿಯವರಿಗೆ ಹಿಂದೂಗಳೂ ಬೇಕಾಗಿಲ್ಲ ಮುಸಲ್ಮಾನರೂ ಬೇಕಾಗಿಲ್ಲ ಅವರಿಗೆ ಬೇಕಾಗಿರುವುದು ಕೇವಲ ಅಧಿಕಾರ ಮಾತ್ರ ಎಂದು ಹಾವೇರಿಯಲ್ಲಿ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಒಕ್ಕಲಿಗರ ಬಗ್ಗೆ ಜಮೀರ್ ಮಾತನಾಡಿದ್ದು ಸರಿಯಲ್ಲ ಎಂಬ ಸಚಿವ ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿದ ಜಮೀರ್ ಒಕ್ಕಲಿಗರ ವಿರುದ್ದ ನಾನು ಏನು ಮಾತಾಡಿದ್ದೇನೆ.? ನಾನು ಪಾಲಿಟಿಕ್ಸ್ ಗೆ ಬರೋಕೆ ಕಾರಣ ಮುಸಲ್ಮಾನ ಗುರುಗಳಲ್ಲ. ಆದಿಚುಂಚನಗಿರಿ ಸ್ವಾಮೀಜಿ ನನ್ನ ಗುರುಗಳು. ಆದಿಚುಂಚನಗಿರಿ ಮಠದ ಹುಡುಗ ನಾನು. ಇವತ್ತು ರಾಜಕೀಯಕ್ಕೆ ಬರೋಕೆ ಕಾರಣ ನನ್ನ ಗುರುಗಳಾದ ಆದಿಚುಂಚನಗಿರಿ ಸ್ವಾಮೀಜಿ ಎಂದು ಜಮೀರ್ ಹೇಳಿಕೆ ನೀಡಿದ್ದಾರೆ.