ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಜು.30ರಂದು ಬೃಹತ್ ಪ್ರತಿಭಟನೆ

ಹೊನ್ನಾವರ: ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಜು.30ರಂದು ಪಟ್ಟಣದ ಮಿನಿವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳ ಒಕ್ಕೂಟ, ಸಮಾನ ಮನಸ್ಕ ಸಮೂಹ ತಿರ್ಮಾನಿಸಿದೆ.

ಈ ಕುರಿತು ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಆರ್.ಜಿ ನಾಯ್ಕ ಮಾತನಾಡಿ, ಪ್ರಾರಂಭದಲ್ಲಿ ಸಾಂಕೇತಿಕವಾದ ಹೋರಾಟ ಮಾಡುತ್ತೇವೆ. ಇದಕ್ಕೆ ಸ್ಪಂದಿಸಿಲ್ಲವೆಂದರೆ ವ್ಯವಸ್ಥೆಯನ್ನ ಅವ್ಯವಸ್ಥೆ ಮಾಡುವ ರೀತಿಯಲ್ಲಿ ನಮ್ಮ ಹೋರಾಟ ಇರುತ್ತದೆ. ಅದಕ್ಕೆ ನಾವು ಜವಾಬ್ದಾರರಲ್ಲ. ಈ ನಮ್ಮ ತುರ್ತು ಬೇಡಿಕೆಗೆ ಆದಷ್ಟು ಬೇಗ ಅಡಿಗಲ್ಲನ್ನ ಹಾಕಿಲ್ಲವೆಂದರೆ, ಬರುವ ಚುನಾವಣೆಯಲ್ಲಿ ಇಡೀ ಜಿಲ್ಲೆಯಿಂದ ನಾವು ಮತದಾನ ಬಹಿಸ್ಕರಿಸುತ್ತೇವೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಜಿಎನ್ ಗೌಡ, ಮಂಗಲದಾಸ ನಾಯ್ಕ, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.