ಹೊಲಕ್ಕೆ ಹೋಗಿದ್ದ ರೈತನಿಗೆ ಕಚ್ಚಿದ ವಿಷಕಾರಿ ಹಾವು.! ಚಿಕಿತ್ಸೆ ಫಲಿಸದೇ ರೈತ ಸಾವು.!

ಮುಂಡಗೋಡ: ಗದ್ದೆಗೆ ಗೊಬ್ಬರ ಸಿಂಪಡಿಸಿಲು ಹೋಗಿದ್ದ ರೈತನಿಗೆ ಹಾವುಕಚ್ಚಿ ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಪಾಂಡುರಂಗ ಚೆನ್ನಾಪುರ (50) ವಿಷಕಾರಿ ಹಾವು ಕಚ್ಚಿ ಮೃತಪಟ್ಟ ರೈತ.

ಈತ ರವಿವಾರ ತನ್ನ ಗೋವಿನ ಜೋಳದ ಗದ್ದೆಗೆ ಗೊಬ್ಬರ ಸಿಂಪಡಿಸಲು ಹೋದಾಗ ಆಕಸ್ಮಿಕವಾಗಿ ಹಾವು ಕಚ್ಚಿದೆ. ಕೂಡಲೇ ಕುಟುಂಬದವರು ಮುಂಡಗೋಡ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದಾನೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.