ಜೂನ್ 27 ರಂದು ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರತಿಷ್ಠಿತ ಸಿ.ಜಿ.ಕೆ ರಂಗಪುರಸ್ಕಾರ ಕಾರ್ಯಕ್ರಮ

ಹೊನ್ನಾವರ : ಪ್ರಸಿದ್ಧ ನಾಟಕಕಾರರಾದ ಶ್ರೀಯುತ ಸಿ.ಜಿ.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ ಕಳೆದ 8 ವರ್ಷಗಳಿಂದ ಈ ರಂಗಪುರಸ್ಕಾರ ನೀಡುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಸಂಗಾತಿ ರಂಗಭೂಮಿ(ರಿ) ಅಂಕೋಲಾ, ಸಂಗಮ ಸೇವಾ ಸಂಸ್ಥೆ(ರಿ) ಹೊನ್ನಾವರ, ಬೀದಿ ನಾಟಕ ಅಕಾಡೆಮಿ ಬೆಂಗಳೂರು, ಇವರ ಆಶ್ರಯದಲ್ಲಿ ಈ ವರ್ಷದ ಸಿ.ಜಿ.ಕೆ ರಂಗಪುರಸ್ಕಾರ ವನ್ನು ನಾಡಿನ ಹಿರಿಯ ಪತ್ರಕರ್ತರು, ರಂಗಭೂಮಿ ಕಲಾವಿದರೂ ಆಗಿರುವ ಜಿ.ಯು.ಭಟ್ ಹೊನ್ನಾವರ ಅವರಿಗೆ ಜೂನ್ 27 ರಂದು ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನಲ್ಲಿ ನೀಡಿ ಗೌರವಿಸಲಾಗುತ್ತಿದೆ ಎಂಬುದನ್ನು ಸಂಗಾತಿ ರಂಗಭೂಮಿಯ ಸಂಘಟನಾ ಕಾರ್ಯದರ್ಶಿ ಪೂಜಾರಾಣಿ ನಾಯ್ಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಜೊತೆಗೆ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಕೂಡ ಉಪಸ್ಥಿತರಿದ್ದರು.