‘ಮರಿ ಯಡಿಯೂರಪ್ಪ ಹುಟ್ಟಿಕೊಂಡಿರುವುದೇ ಕೆಲವರಿಗೆ ಸಮಸ್ಯೆಯಾಗಿದೆ’ ವಿಜಯೇಂದ್ರ ಮಾರ್ಮಿಕ ನುಡಿ

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಯಿತು, ರಾಜಕೀಯವಾಗಿ ನಿವೃತ್ತಿಯಾಗುತ್ತಾರೆ ಎಂದುಕೊಂಡವರಿಗೆ ಮರಿ ಯಡಿಯೂರಪ್ಪ ಹುಟ್ಟಿಕೊಂಡಿರುವುದು ಬಹಳಷ್ಟು ಸಮಸ್ಯೆಯಾಗಿದೆ ಎಂದು ವಿಜಯೇಂದ್ರ ಮಾರ್ಮಿಕವಾಗಿ ಮಾತನಾಡಿದರು. ನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಪಕ್ಷದವರಿಗಿಂತ ಬೇರೆ ಪಕ್ಷದವರಿಗೇ ನನ್ನ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸವಿದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಮಾಜಿ ಸಚಿವ ಎಂ.ಬಿ.ಪಾಟೀಲ್ ನನ್ನ ಮೇಲೆ ಪ್ರೀತಿ-ವಿಶ್ವಾಸ ತೋರುತ್ತಾರೆ ಎಂದರು.

ನನಗೆ ಕಬಡ್ಡಿಯ ಜೊತೆ ಚೆಸ್ ಆಡಲೂ ಗೊತ್ತಿದೆ ಇದರಿಂದ ಕೆಲವರಿಗೆ ಸಮಸ್ಯೆಯಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ಯಡಿಯೂರಪ್ಪ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾನು ಸಾಗುತ್ತೇನೆ. ಹಿರಿಯರ ಆಶೀರ್ವಾದ, ಮಾರ್ಗದರ್ಶನ ಬೇಕಿದೆ ಎಂದರು.