ಸ್ಮಶಾನ ಜಾಗಕ್ಕಾಗಿ ಚರಂಡಿ ನೀರು ಮೈಮೇಲೆ ಸುರಿ​ದು​ಕೊಂಡ ಮಹಿಳೆ

ರಾಯಚೂರು (ಜೂ.21): ಸಫಾಯಿ ಕರ್ಮ​ಚಾರಿ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಒದ​ಗಿ​ಸಲು ಅಧಿ​ಕಾ​ರಿ​ಗಳು ನಿರ್ಲಕ್ಷ್ಯ ಧೋರಣೆ ತೋರು​ತ್ತಿದ್ದಾರೆಂದು ಮಹಿಳೆಯೊಬ್ಬರು ಕಾಲು​ವೆಗೆ ಇಳಿದು ಚರಂಡಿ ನೀರನ್ನು ಮೈಮೇಲೆ ಸುರಿ​ದು​ಕೊಂಡ ಘಟನೆ ನಗ​ರ​ದಲ್ಲಿ ಜರು​ಗಿದೆ. ಸಫಾ​ಯಿ ​ಕ​ರ್ಮ​ಚಾರಿ ಗೀತಾಸಿಂಗ್‌ ಚರಂಡಿ​ಗಿ​ಳಿದ ಮಹಿಳೆ​. ಕಳೆದ ಕೆಲ ದಿನ​ಗ​ಳ​ ಹಿಂದೆ ಪ್ರತ್ಯೇಕ ಸ್ಮಶಾನ ಮಂಜೂರು ಮಾಡುವಂತೆ ಮನೆಯ ಮುಂದೆ ಶವವನ್ನಿಟ್ಟು ಪ್ರತಿಭಟನೆ ಮಾಡಲಾಗಿತ್ತು. 

ಈ ವೇಳೆ ನಗರಸಭೆ ಅಧಿ​ಕಾ​ರಿ ಮತ್ತು ತಹಸೀಲ್ದಾರ್‌ ಸ್ಥಳಕ್ಕೆ ​ಬಂದು ಸ್ಮಶಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಇಷ್ಟು ದಿನ​ಗಳ ಕಳೆ​ದರೂ ಭರ​ವಸೆ ಈಡೇ​ರದ ಕಾರ​ಣಕ್ಕೆ ಅಸ​ಮಾ​ಧಾ​ನ​ಗೊಂಡ ಗೀತಾ ಸಿಂಗ್‌ ಜಿಲ್ಲಾ ಉಸ್ತುವಾರಿ ಸಚಿವ ಶರ​ಣ​ಪ್ರ​ಕಾಶ ಪಾಟೀಲ್‌ ಅವ​ರಿಗೆ ಸೋಮ​ವಾರ ಮನವಿ ಸಲ್ಲಿ​ಸಲು ಮುಂದಾ​ಗಿದ್ದರು, ಅದಕ್ಕೆ ಪೊಲೀ​ಸರು ಅವ​ಕಾಶ ನೀಡದ ಕಾರ​ಣಕ್ಕೆ ಸಿಟ್ಟಿ​ಗೆದ್ದ ಅವರು ಸಮೀ​ಪ​ದ ರಾಜಕಾಲುವೆಗೆ ಇಳಿದು ಚರಂಡಿ ನೀರನ್ನು ಮೈಮೇಲೆ ಹಾಕಿಕೊಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.