ಹಳಿಯಾಳ :ಪಡಿತರ ಚೀಟಿದಾರರು ಜೂನ್:27 ರೊಳಗೆ ಪಡಿತರ ಪಡೆದುಕೊಳ್ಳಿ : ಮಂಜುನಾಥ್ ಮೇತ್ರಿ

ಹಳಿಯಾಳ : ತಾಲ್ಲೂಕಿನ ಪಡಿತರ ಚೀಟಿದಾರರು ಈ ತಿಂಗಳ ಪಡಿತರವನ್ನು ಜೂನ್ :27 ರೊಳಗೆ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಳ್ಳುವಂತೆ ಹಳಿಯಾಳ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆಹಾರ ನಿರೀಕ್ಷಕರಾದ ಮಂಜುನಾಥ್ ಮೇತ್ರಿಯವರು ಇಂದು ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಜೂನ್:28 ರಿಂದ ಇಲಾಖೆಯ ಸರ್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿದ್ದು ಈ ತಿಂಗಳ 28, 29 ಮತ್ತು 30 ರಂದು ಪಡಿತರ ವಿತರಣಾ ಕಾರ್ಯ ಇರುವುದಿಲ್ಲ. ಆದ್ದರಿಂದ ಪಡಿತರದಾರರು ಜೂನ್:27 ರೊಳಗೆ ಪಡಿತರವನ್ನು ಪಡೆದುಕೊಳ್ಳುವಂತೆ ಮಂಜುನಾಥ್ ಮೇತ್ರಿಯವರು ಮಾಧ್ಯಮಕ್ಕೆ ನೀಡಿದ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.