ಹುಬ್ಬಳ್ಳಿ: ಕಾಂಕ್ರಿಟ್ ಹೈಜಾಕ್ ವಾಹನ ಹರಿದು ರೈಲ್ವೆ ಸಿಬ್ಬಂದಿ ದೇಹ ಛಿದ್ರ ಛಿದ್ರ..!

ಹುಬ್ಬಳ್ಳಿ(ಜೂ.14): ರೈಲ್ವೆ ಸಿಬ್ಬಂದಿ ಮೇಲೆ ಕಾಂಕ್ರಿಟ್ ಹೈಜಾಕ್ ವಾಹನ ಗುದ್ದಿದ ಪರಿಣಾಮ ರೈಲ್ವೆ ಸಿಬ್ಬಂದಿ ದೇಹ ಛಿದ್ರ ಛಿದ್ರವಾದ ಘಟನೆ ಹುಬ್ಬಳ್ಳಿ ನಗರದ ಗದಗ ರಸ್ತೆಯಲ್ಲಿರುವ ವರ್ಕ್ ಶಾಪ್ ಬಳಿ ಇಂದು(ಬುಧವಾರ) ನಡೆದಿದೆ. 

ರೈಲ್ವೆ ಇಲಾಖೆಯ ವರ್ಕ್ ಶಾಪ್‌ನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಹರಿ ಎಂಬ ಸಿಬ್ಬಂದಿಯೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಇಲ್ಲಿ ಹೊಸದಾಗಿ ಕಟ್ಟಡ ಕಟ್ಟುತ್ತಿರುವಾಗ, ಕಾಂಕ್ರಿಟ್ ಹೈಜಾಕ್ ನಿಂದ ಚಾಲಕ ಜೋರಾಗಿ ಬಂದಿದ್ದಾನೆ. ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಹರಿ ಮೇಲೆ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಶ್ರೀಹರಿ ಸಾವನ್ನಪ್ಪಿದ್ದಾರೆ.