ಸಿದ್ದಾಪುರ : ಹಕ್ಕುದಾರರಿಗೆ ಮೋಸ ಮಾಡಿ ಆಸ್ತಿ ಮಾರಾಟ, ಕಾನೂನು ಕ್ರಮಕ್ಕೆ ದೂರು.

ಸಿದ್ದಾಪುರ : ಹಕ್ಕುದಾರರಿಗೆ ಮೋಸ ಮಾಡಿ ಆಸ್ತಿಯಲ್ಲಿನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೊಬ್ಬರಿಗೆ ಆಸ್ತಿಯನ್ನು ಮಾರಾಟ ಮಾಡಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮತ್ತು ನ್ಯಾಯ ಒದಗಿಸಿಕೊಡುವಂತೆ ಠಾಣೆಯಲ್ಲಿ ದೂರು ನೀಡಿದ್ದಾರೆ
ಹೆಗ್ನೂರು ಸಮೀಪದ ಬಾಳೆಕೊಪ್ಪ ಗ್ರಾಮದ ಹೆಗ್ಗಾರ್ ನ ಕೃಷ್ಣ ಗಣಪತಿ ಭಟ್ ದೂರು ನೀಡಿದ್ದಾರೆ
ಹೊಸತೋಟ ಮೂಲದ ಗಣಪತಿ ವಿಶ್ವೇಶ್ವರ ಭಟ್ಟ ಎನ್ನುವವರು ಪಿರಿಯಾದಿಯ ತಂದೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಕ್ಷಯ್ ಗಜಾನನ ಹೆಗಡೆ ಹೊಸತೋಟ ಇವರಿಗೆ ಆಸ್ತಿಯ ಹಕ್ಕನ್ನ ವರ್ಗಾಯಿಸಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ರೀತಿ ಕಾನೂನು ಕ್ರಮ ಜರುಗಿಸಿ ತಮಗೆ ಆದ ಅನ್ಯಾಯವನ್ನು ಸರಿಪಡಿಸಿ ಕೊಡುವಂತೆ ದೂರು ದಾಖಲಿಸಿದ್ದಾರೆ