ಹೊನ್ನಾವರ: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರ

ಹೊನ್ನಾವರ: ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಬೈಕ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟ‌ನೆ ನಿನ್ನೆ ರಾತ್ರಿ ಹೊನ್ನಾವರದ ಪ್ರಭಾತನಗರದ ಕುಳಕೋಡ ಕ್ರಾಸ್ ಹತ್ತಿರ ನಡೆದಿದೆ.

ಹರೀಶ ಕೃಷ್ಣ ಮೇಸ್ತಾ(28 )ಮೃತಪಟ್ಟ ಬೈಕ ಸವಾರನಾಗಿದ್ದು, ಕರಿಕುರ್ವ ಜಲಹಳ್ಳಿ ಗ್ರಾಮದವನಾಗಿದ್ದಾನೆ. ನಿನ್ನೆ ರಾತ್ರಿ ಜಲಹಳ್ಳಿಯಿಂದ ಹೊನ್ನಾವರದ ಕಡೆಗೆ ಬೈಕ ಮೇಲೆ ಬರುತ್ತಿರುವಾಗ ಹೊನ್ನಾವರದ ಪ್ರಭಾತನಗರ ಕುಳಕೋಡ ಕ್ರಾಸ್ ಹತ್ತಿರ ಕ್ರಾಸ್‌ನಿಂದ ಏಕಾಏಕಿ ಬಂದ ಟಿಪ್ಪ‌ರ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಹರೀಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಟಿಪ್ಪರ ಚಾಲಕ ಯಾವುದೇ ಸಿಗ್ನಲ್ ಹಾಕದೇ ಬಂದಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ.

ಇನ್ನೂ ಈ ರಸ್ತೆಯು ಹೊನ್ನಾವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಶಾಲಾ ಕಾಲೇಜು ಆವರಣ ಇರುವ ಈ ರಸ್ತೆಯಲ್ಲಿ‌ ಸಾಕಷ್ಟು ವಾಹನಗಳು ಓಡಾಡ್ತಾವೆ. ಜನ ಸಂಚಾರ ಇರುವ ಈ ರಸ್ತೆಯಲ್ಲಿ ರೋಡ್ ಹಂಪ್‌ಗಳಿಲ್ಲ ,ಮತ್ತು ಸಂಭಂದಿಸಿದ ಅಧಿಕಾರಿಗಳು ಈ ಕುರಿತು ಗಮನಹರಿಸಲು ಸಾರ್ವಜನಿಕರು ಒತ್ತಾಯಿಸಿದ್ರು..

ಇನ್ನೂ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಗರ ಪೋಲಿಸರು ಟಿಪ್ಪರ್ ಚಾಲಕ ಹಾಗೂ ವಾಹನ ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಿಕೊಂಡು ಮೃತಪಟ್ಟ ಬೈಕ ಸವಾರನ ಮೃತದೇಹವನ್ನು ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ.

ಒಟ್ಟಾರೆಯಾಗಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಎಷ್ಟೇ ಹೇಳಿದ್ರೂ ಜನತೆ ಮಾತ್ರ ಕ್ಯಾರೆ ಅನ್ನದಿರೋದೆ ಇಂತಹ ಅಪಘಾತಕ್ಕೆ ಕಾರಣವಾಗ್ತಿದೆ…