ಸಿದ್ದಾಪುರ : ಉಚಿತ ಆರೊಗ್ಯ ತಪಾಸಣೆ ಹಾಗೂ ರೋಜಗಾರ ದಿವಸ ಆಚರಣೆ ಮತ್ತು ಆರ್ಥಿಕ ಸಾಕ್ಷರತಾ ಕಾರ್ಯಕ್ರಮ.

ಸಿದ್ದಾಪುರ: ಮ.ಗಾ.ಗ್ರಾ.ಉ.ಖಾತ್ರಿ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಗ್ರಾಮ ಆರೋಗ್ಯ ಅಭಿಯಾನದಡಿ ಉಚಿತ ಆರೊಗ್ಯ ತಪಾಸಣೆ ಹಾಗೂ ರೋಜಗಾರ ದಿವಸ ಆಚರಣೆ ಮತ್ತು ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಹಲಗೇರಿ ಗ್ರಾ.ಪಂ ದ ಹೂಸುರ ನಲ್ಲಿ ನಡೆಯಿತು
ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಕರಾದ ಶಿವಶಂಕರ ಎನ್ ಕೆ ಮಾಹಿತಿ ನೀಡಿ ಬ್ಯಾಂಕ್ ಖಾತೆ ನಿರ್ವಹಣೆ ಅದರಿಂದಾಗು ಲಾಭ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಜೀವನ ಭೀಮಾ ಯೋಜನೆ, ಸ್ವ ಉದ್ಯೋಗ ತರಬೇತಿಗಳ ಬಗ್ಗೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೋಹಿಣಿ ಕೆ ನಾಯ್ಕ ಆರೋಗ್ಯ ತಪಾಸಣೆ ನಡೆಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಎಮ್ ಪಿ ನಾಯ್ಕ, ಉಪಾಧ್ಯಕ್ಷೆ ಸುಶೀಲಾ ಎಮ್ ನಾಯ್ಕ, ಪಿಡಿಓ ಮಹಮದ್ ರೀಯಾಜ, ಆಶಾ ಕಾರ್ಯಕರ್ತೆ ಯರಾದ ಪಾರ್ವತಿ ನಾಯ್ಕ, ಸುಜಾತ ನಾಯ್ಕ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.