ಗೋಕರ್ಣ:ಅಪಾಯಕ್ಕೆ ಸಿಲುಕಿದ ಇಬ್ಬರು ಬಾಲಕರ ರಕ್ಷಣೆ

ಗೋಕರ್ಣ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಲೈಫಗಾರ್ಡ್ಗಳು ಅವರನ್ನು ರಕ್ಷಣೆ ಮಾಡಿದ ಘಟನೆ ನೆಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಯಾನ್‌ ಖಾನ್‌(13), ಸುಭಾನ್‌ ಖಾನ್‌(21) ಇವರು ರಕ್ಷಣೆಗೊಳಗಾದ ಬಾಲಕರಾಗಿದ್ದಾರೆ. ಇವರು ಸೊರಬದಿಂದ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡುವ ವೇಳೆ ನೀರಿನ ಅಲೆಗೆ ಸಿಲುಕಿ ಮುಳುಗುವ ಸ್ಥಿತಿಯಲ್ಲಿದ್ದ ಇವರನ್ನು ಗಮನಿಸಿದ ಲೈಫಗಾರ್ಡ್‌ಗಳಾದ ಮೋಹನ ಅಂಬಿಗ, ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ, ಬೀಚ್‌ ವ್ಯವಸ್ಥಾಪಕ ರವಿ ನಾಯಕ್‌ , ರಾಜೇಶ ಇತರ ಸಮಯಪ್ರಜ್ಞೆಯಿಂದ ಈ ಬಾಲಕರು ಅಪಾಯದಿಂದ ಪಾರಾಗಿದ್ದಾರೆ.