ಕುಮಟಾ ತದಡಿಯಲ್ಲಿ ಅಪರಿಚಿತರ ಓಡಾಟ

ತದಡಿ ಭಾಗದಲ್ಲಿ ಅಪರಿಚಿತರು ಆಗಮಿಸಿ ಆತಂಕ ಸೃಷ್ಟಿಸಿದ ಘಟನೆ ಕುಮಟಾ ತಾಲೂಕಿನ ತದಡಿ ಗ್ರಾಮದಲ್ಲಿ ನಡೆದಿದೆ. ತಕ್ಷಣ ಸ್ಥಳಿಯರು ಪೋಲಿಸ್‌ ತುರ್ತು ವಾಹನ 112ಕ್ಕೆ ಕರೆಮಾಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.

ಶಿರಸಿಯಿಂದ ಹಣ್ಣಿನ ವ್ಯಾಪರಕ್ಕೆಂದು ಬಂದಿದ್ದಾಗಿ ಪೋಲಿಸರ ಬಳಿ ಹೇಳಿದ್ದು, ಬೆಳಗಿನ ಜಾವ ಅಂಕೋಲಾಕ್ಕೆ ತೆರಳುವ ವೇಳೆ ತದಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಬಂದಿದ್ದಾಗಿ ತಿಳಿಸಿದ್ದಾರೆ. ಈ ಕುರಿತು ಶಿರಸಿಯಲ್ಲಿಯೂ ಸಹ ವಿಚಾರಿಸಿದಾಗ ನಿಜಾಂಶ ಗೊತ್ತಾಗಿದ್ದು, ಇಬ್ಬರನ್ನು ವಾಪಸ್‌ ಬಿಟ್ಟು ಕಳುಹಿಸಿದ್ದಾರೆ.