ಜಿಎಸ್‌ಟಿ ವಿಧಿಸಿದರೂ ದರ ಹೆಚ್ಚಳ ಮಾಡುವ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು: ಮೊಸರು ಸೇರಿದಂತೆ ಹಾಲಿನ ಇತರೇ ಉತ್ಪನ್ನಗಳಿಗೆ 5% ಜಿಎಸ್‌ಟಿ ವಿಧಿಸಿದರೂ ದರ ಹೆಚ್ಚಳ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು ಪ್ಯಾಕ್ ಮಾಡಿ ಮಾರಾಟ ಮಾಡುವವರಿಗೆ ಮಾತ್ರ ಜಿಎಸ್‌ಟಿ ಹಾಕಲಾಗಿದ್ದು ಸಾಮಾನ್ಯವಾಗಿ ಮಾರಾಟ ಮಾಡುವ ಹಾಲಿನ ಉತ್ಪನ್ನಗಳಿಗೆ ಜಿಎಸ್‌ಟಿ ವಿಧಿಸಿಲ್ಲ ಎಂದರು.

ಪ್ಯಾಕ್ ಮಾಡಿದ ಹಾಲು ಉತ್ಪನ್ನಗಳಿಗೆ ಮಾತ್ರ 5% ಜಿಎಸ್‌ಟಿ ಹಾಕಿದ್ದೇವೆ. ಅದನ್ನು ಮರು ಪಾವತಿ ಮಾಡಲು ಅವಕಾಶವಿದೆ. ಹೀಗಾಗಿ ಜಿಎಸ್‌ಟಿ ಇದ್ದರೂ ಸಹ ವಸ್ತುಗಳ ದರ ಹೆಚ್ಚಿಸುವ ಅಗತ್ಯವಿಲ್ಲ. 5% ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಜಿಎಸ್‌ಟಿ ಕೌನ್ಸಿಲ್ ಮೂಲಕ ನಿರ್ದೇಶನ ಕೊಡಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

Leave a Reply

Your email address will not be published. Required fields are marked *