ಭಾರೀ ಮಳೆಗೆ ಹೊನ್ನಾವರದ ಹೊಸಾಕುಳಿ ಗ್ರಾಮ ಜಲಾವೃತ

ಹೊನ್ನಾವರ: ಭಾರೀ ಮಳೆಗೆ ಹೊನ್ನಾವರದ ಹೊಸಾಕುಳಿ ಗ್ರಾಮ ಜಲಾವೃತಗೊಂಡಿದೆ. ಉಕ್ಕಿಹರಿಯುತ್ತಿರುವ ಹಳ್ಳದಿಂದಾಗಿ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಸದ್ಯ ಸುರಿಯುತ್ತಿರುವ ಮಳೆಗೆ ಜನರ ಬದುಕು ತತ್ತರಿಸಿ ಹೋಗಿದೆ.

ಕಳೆದ ಬಾರಿ ಭಾರೀ ಮಳೆ ಸುರಿದಾಗ ಹೊಸಾಕುಳಿ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಬಾಲಕಿಯೊಬ್ಬಳು ಮಾಧ್ಯಮದ ಮೂಲಕ ಮನವಿ ಮಾಡಿದ್ದಳು. ಬಾಲಕಿ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಸ್ಥಳಿಯ ಶಾಸಕ ದಿನಕರ ಶೆಟ್ಟಿ, ಅಂದಿನ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು.

ಆದರೆ ಏಳೆಂಟು ತಿಂಗಳು ಕಳೆದರೂ ಶಾಸಕರು, ಸಚಿವರು, ಅಧಿಕಾರಿಗಳು ಮಾತ್ರ ಗ್ರಾಮದತ್ತ ಮುಖ ಮಾಡಿಲ್ಲ.
ಜೀವ ಪಣಕ್ಕಿಟ್ಟು, ಪ್ರವಾಹ ದಾಟಿ ಶಾಲೆಗೆ ಹೋಗಬೇಕಾದ ದಯನಿಯ ಸ್ಥಿತಿ ಇಲ್ಲಿನ ಮಕ್ಕಳಿಗೆ ಬಂದೊದಗಿದೆ.

ಒಟ್ಟಾರೆ ಹೊಸಾಕುಳಿ ಗ್ರಾಮದ ಜನರ ಪಾಡು ಹೇಳತೀರದಾಗಿದ್ದು ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *