ಒಂದು ಕುಲಕ್ಕೆ ಅವಮಾನ ಮಾಡುವಂತೆ ನಾವು ಯಾವುದೇ ಚಿತ್ರ ಮಾಡೋದಿಲ್ಲ – ಭಾ.ಮ.ಹರೀಶ್

ಬೆಂಗಳೂರು: ಯಾವುದೇ ಒಂದು ಕುಲಕ್ಕೆ ಅವಮಾನ ಮಾಡುವಂತೆ ನಾವು ಯಾವುದೇ ಚಿತ್ರ ಮಾಡೋದಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ.ಹರೀಶ್ ಹೇಳಿದ್ದಾರೆ. ಈ ಸಂಬಂಧ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದರು.

‘ಹೆಡ್ ಬುಷ್’ ಸಿನಿಮಾದಲ್ಲಿ ಬೆಂಗಳೂರು ಕರಗದ ಬಗ್ಗೆ ಅವಹೇಳನಕಾರಿ ಪದಗಳ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಚಿತ್ರದಲ್ಲಿ ತಿಗಳರ ಪೇಟೆ ಅಂತ ಹೇಳಿ ಬೇರೆ ಕಡೆ ಕರಗ ತೋರಿಸಿದ್ದಾರೆ ಎಂದಿದ್ದಾರೆ. ನಾನಿನ್ನೂ ಚಿತ್ರ ನೋಡಿಲ್ಲ. ಜುಜುಬಿ ಕರಗ ಎಂದಿದ್ದಾರಂತೆ, ಅದು ನೋವು ತಂದಿದೆ. ಶಿವಶಂಕರ್ ಬಗ್ಗೆ ಮಾತನಾಡಿರೋದು ನೋವು ತಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾಳೆ ಬೆಳಗ್ಗೆ 11:30 ಕ್ಕೆ ಆ ಚಿತ್ರ ತಂಡವನ್ನು ವಾಣಿಜ್ಯ ಮಂಡಳಿಗೆ ಕರೆಯಿಸಿ ಸಮಸ್ಯೆ ಬಗೆಹರಿಸುವುದಾಗಿ ಹರೀಶ್ ಭರವಸೆ ಕೊಟ್ಟಿದ್ದಾರೆ.