ಪ್ರಧಾನಿ ಮೋದಿ 2 ದಿನಗಳ ಉತ್ತರಾಖಂಡ ಭೇಟಿ: ದೇಶದ ಅತಿ ಉದ್ಧದ ರೋಪ್‌ವೇ ಪ್ರಾಜೆಕ್ಟ್‌ಗೆ ಚಾಲನೆ.!

ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಉತ್ತರಾಖಂಡ ಭೇಟಿ ಪ್ರಾರಂಭಿಸಿದ್ದು, ಕೇದಾರನಾಥದ ದೇಶದ ಅತಿ ಉದ್ಧದ ರೋಪ್‌ವೇ ಪ್ರಾಜೆಕ್ಟ್‌ಗೆ ಚಾಲನೆ ಕೊಟ್ಟಿದ್ದಾರೆ. ಕೇದಾರನಾಥ ಹಾಗೂ ಬದ್ರಿನಾಥ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಆಗಮನದ ಹಿನ್ನಲೆ ಬಿಗಿ ಭದ್ರತೆಯನ್ನು ಮಾಡಲಾಗಿದೆ.

ಪ್ರಧಾನಿ ಮೋದಿ ಕೇದಾರನಾಥ ಮತ್ತು ಬದ್ರಿನಾಥ್‌ ಧಾಮಗಳಲ್ಲಿ 9.7 ಕಿಮೀ ಗೌರಿಕುಂಡ್-ಕೇದಾರನಾಥ ರೋಪ್‌ವೇ ಮತ್ತು ರಿಷಿಕೇಶ್, ಜೋಶಿಮಠ ಮತ್ತು ಬದ್ರಿನಾಥ್‌ ಅನ್ನು ಡೆಹ್ರಾಡೂನ್‌ನೊಂದಿಗೆ ಸಂಪರ್ಕಿಸುವ ಹಲವಾರು ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. 

ಕೇದಾರನಾಥ ರೋಪ್ ವೇ ಗೌರಿಕುಂಡ್ ಅನ್ನು ಕೇದಾರನಾಥದೊಂದಿಗೆ ಸಂಪರ್ಕಿಸುತ್ತದೆ. ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು 30 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. ಹೇಮಕುಂಡ್ ರೋಪ್‌ವೇ ಗೋವಿಂದ್ ಘಾಟ್ ಅನ್ನು ಗುರುದ್ವಾರ ಶ್ರೀ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರುತ್ತದೆ ಮತ್ತು ಪ್ರಯಾಣದ ಸಮಯವನ್ನು ಒಂದು ದಿನದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.