ಅಕ್ರಮ ಪಟಾಕಿ ಘಟಕದಲ್ಲಿ ಸ್ಪೋಟ: 16 ವರ್ಷದ ಬಾಲಕ ಸಾವು, ಓರ್ವ ಮಹಿಳೆಗೆ ಗಾಯ

ಪಶ್ಚಿಮ ಬಂಗಾಳ: ಅಕ್ರಮ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿ ಬಾಲಕ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಪೂರ್ವ ಮೇದಿನಿಪುರ ಜಿಲ್ಲೆಯ ಪಂಸ್ಕುರಾದಲ್ಲಿ ನಡೆದಿದೆ. ಪ್ರದೀಪ್ ಸಮಂತ (16) ಮೃತಪಟ್ಟಿದ್ದು, ಸ್ವರ್ಣಲತಾ ಭಕ್ತ (50) ಗಾಯಗೊಂಡಿದ್ದಾಳೆ.

ಸಾಧುಪೋಟ ಗ್ರಾಮದ ಶ್ರೀಕಾಂತ ಭಕ್ತ ಎನ್ನುವವರಿಗೆ ಸೇರಿದ ಅಕ್ರಮ ಪಟಾಕಿ ಘಟಕದಲ್ಲಿ ಈ ಅವಧಡ ಸಂಭವಿಸಿದೆ. ಶ್ರೀಕಾಂತ ಭಕ್ತ ಎರಡು ವರ್ಷಗಳ ಕಾಲ ಘಟಕ ನಡೆಸಲು ಪರವಾನಗಿ ಹೊಂದಿದ್ದರು. ಆದರೆ ಪಟಾಕಿ ತಯಾರಿಕೆಗೆ ಪರವಾನಗಿ ನವೀಕರಿಸದೆ ಅಕ್ರಮವಾಗಿ ಕಾರ್ಖಾನೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.