ಕಾಂಗ್ರೆಸ್‌ ಪರೇಶ್ ಮೇಸ್ತಾ ಪ್ರಕರಣದ ಸಾಕ್ಷ್ಯವನ್ನು ನಾಶ ಮಾಡಿದೆ – ಪ್ರಮೋದ್‌ ಮುತಾಲಿಕ್‌

ಉಡುಪಿ: ಪರೇಶ್‌ ಮೇಸ್ತನ ಸಾವು ಆಕಸ್ಮಿಕ, ಅದು ಕೊಲೆಯಲ್ಲ ಎಂಬ ಸಿಬಿಐ ವರದಿಯನ್ನು ನಾನು ಧಿಕ್ಕರಿಸುತ್ತೇನೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿ, ಪರೇಶ್ ಮೇಸ್ತಾ ಪ್ರಕರಣದ ಸಿಬಿಐ ವರದಿ ಮೋಸದ್ದಾಗಿದೆ. ಆತನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷಗಳನ್ನು ನಾಶ ಮಾಡಿದೆ. ಈಗಿನ ಕೇಂದ್ರ ಸರ್ಕಾರ ಕೇಸನ್ನು ಮತ್ತೆ ತೆರೆದು ತನಿಖೆ ನಡೆಸಬೇಕು. ಈಗ ಸಿಬಿಐ ನೀಡಿರುವ ವರದಿಯಿಂದ ಹಿಂದುತ್ವಕ್ಕೆ, ಹಿಂದು ಕುಟುಂಬಕ್ಕೆ ಅನ್ಯಾಯವಾಗಿದೆ. ಇದರ ಶ್ರೀ ರಾಮ ಸೇನೆ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ ಎಂದು ಮುತಾಲಿಕ್ ಹೇಳಿದ್ದಾರೆ.