ದಸರಾ ಹಿನ್ನೆಲೆ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ.! ಖಾಸಗಿ ಬಸ್ ಗಳ ಮೇಲೆ ಆರ್‌ಟಿಒ ಅಧಿಕಾರಿಗಳ ದಾಳಿ.!

ಬೆಂಗಳೂರು: ದಸರಾ ನೆಪದಲ್ಲಿ ಖಾಸಗಿ ಬಸ್‌ ಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿದ್ದ ಹಿನ್ನೆಲೆ ರಾಜಧಾನಿಯ ವಿವಿಧೆಡೆ ಆರ್‌ಟಿಒ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ರಾತ್ರೋರಾತ್ರಿ ನಗರದ 12 ಕ್ಕೂ ಹೆಚ್ಚು ಕಡೆ ಆರ್‌ಟಿಒ ಅಧಿಕಾರಿಗಳು ಖಾಸಗಿ ಬಸ್ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಆನಂದ್ ರಾವ್‌ ಸರ್ಕಲ್‌, ಮಡಿವಾಳ, ಗೊರಗುಂಟೆಪಾಳ್ಯ ಸೇರಿ ವಿವಿಧೆಡೆ ಖಾಸಗಿ ಬಸ್‌ಗಳ ಮೇಲೆ ದಾಳಿ ನಡೆಸಿ 170 ಕ್ಕೂ ಹೆಚ್ಚು ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.