ಮುಸ್ಲಿಂ ಉದ್ಯಮಿಯಿಂದ ತಿಮ್ಮಪ್ಪನಿಗೆ 1 ಕೋಟಿ ರೂ. ದೇಣಿಗೆ.!

ತಿರುಪತಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಉದ್ಯಮಿಯೋರ್ವರು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ 1.02 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ಎಂಬ ವ್ಯಕ್ತಿ ದೇಣಿಗೆ ನೀಡಿದವರು.

ಶ್ರೀನಿವಾಸ ಭಕ್ತರಾಗಿರುವ ಇವರು, ಈ ಹಿಂದೆಯೂ ಹಲವಾರು ದೇವಸ್ಥಾನಗಳಿಗೆ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ. ಘನಿ ತಿರುಪತಿಗೆ ಸುಮಾರು 25 ವರ್ಷಗಳಿಂದ ಆಗಮಿಸುತ್ತಿದ್ದು, ತಿಮ್ಮಪ್ಪನ ಮೇಲೆ ಅಪಾರ ನಂಬಿಕೆ ಇದೆ ಎಂದು ಹೇಳಿದ್ದಾರೆ. ದೇಣಿಗೆ ನೀಡಿರುವ 1 ಕೋಟಿಯಲ್ಲಿ ಸುಮಾರು 87 ಲಕ್ಷದಷ್ಟು ಫರ್ನಿಚರ್​ ವಸ್ತುಗಳಿದೆಯೆಂದು ಘನಿ ತಿಳಿಸಿದ್ದಾರೆ.