ರಜೌರಿ ಬಳಿ ಕಮರಿಗೆ ಬಿದ್ದ ಬಸ್:​​ 04 ಮಂದಿ ಸಾವು, ಹಲವು ಜನರಿಗೆ ಗಾಯ

ನವದೆಹಲಿ: ರಜೌರಿ ಜಿಲ್ಲೆಯ ಭಿಂಬರ್ ಗಲ್ಲಿ ಬಳಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಆಳವಾದ ಪ್ರಪಾತಕ್ಕೆ ಉರುಳಿದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ಮಂಜಕೋಟೆ ತಹಶೀಲ್ದಾರ್ ಜಾವೇದ್ ಚೌಧರಿ ತಿಳಿಸಿದ್ದಾರೆ.

ರಾಜೌರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಿಂದ ಉಂಟಾದ ಪ್ರಾಣಹಾನಿ ಭಯಭೀತವಾಗಿದೆ. ದೇವರು ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ನೀಡಲಿ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದ್ದೇವೆ ಎಂದು ಜಮ್ಮು ಕಾಶ್ಮೀರದ ಲೆಫಿನೆಂಟ್‌ ಜನರಲ್‌ ಕಚೇರಿ ಟ್ವೀಟ್‌ ಮಾಡಿದೆ.