ಸ್ವರ್ಣವಲ್ಲೀ ಮಠದಲ್ಲಿ ಸೆ. 26 ರಿಂದ ಅ. 5 ರವರೆಗೆ ಶರನ್ನವರಾತ್ರಿ

ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸೆ. 26 ರಿಂದ ಅ. 5 ರವರೆಗೆ ಶರನ್ನವರಾತ್ರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಕುರಿತು ಸೋಮವಾರ ಸ್ವರ್ಣವಲ್ಲೀ ಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮಾಹಿತಿ ನೀಡಿದರು.

ಸೆ. 26 ರಂದು ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಗಣಪತಿ ಪೂಜಾ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿ ದಿವಸ ಬೆಳಿಗ್ಗೆ ವಿವಿಧ ಧಾರ್ಮಿಯ ಕಾರ್ಯಕ್ರಮ, ಮಧ್ಯಾಹ್ನ ದುರ್ಗಾಪೂಜೆ ಹಾಗೂ ಮಹಾಮಂಗಳಾರತಿ, ಪ್ರತಿ ದಿನ ರಾತ್ರಿ ದುರ್ಗಾ ಮಹಾಪೂಜಾ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ಸೆ. 30 ರಂದು ಲಲಿತಾ ಪಂಚಮೀ, ಸಾಯಂಕಾಲ ಶತರುದ್ರಾಭಿಷೇಕ ಸಹಿತ ಮಹಾಪೂಜಾ, ಮಹಾಮಂಗಳಾರತಿ, ಅ. 2 ರಂದು ಬೆಳಿಗ್ಗೆ ಶಾರದಾ ಸ್ಥಾಪನೆ, ಅ.3 ರಂದು ದುರ್ಗಾಷ್ಟಮೀ, ಅ. 4 ರಂದು ಮಹಾನವಮೀ, ಲಕ್ಷ್ಮೀ ಪೂಜೆ, ಶ್ರೀ ಕ್ಷೇತ್ರಪಾಲ ಬಲಿ ಮತ್ತು ಅ. 5 ರಂದು ವಿಜಯಾದಶಮಿ ನಡೆಯಲಿದೆ. ವಿಜಯಾದಶಮಿಯಂದು ಸಂಜೆ 4.30 ಕ್ಕೆ ಶ್ರೀ ಲಕ್ಷ್ಮೀನರಸಿಂಹ ದೇವರ ಸೀಮೋಲ್ಲಂಘನ, ಶಮೀಪೂಜಾ, ಅಷ್ಟಾವಧಾನ ಸೇವಾ ನಡೆಯಲಿದೆ. ನಂತರ ಸಾಯಂಕಾಲ 8 ಗಂಟೆಯಿಂದ ಮಹಾಮಂಗಳಾರತಿ, ವಿವಿಧ ಸೇವೆ, ಆಶೀರ್ವಚನ, ಫಲಮಂತ್ರಾಕ್ಷತೆ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.

ಅ. 6 ರಂದು ಶ್ರೀ ನವಚಂಡಿ ಹೋಮ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಮಂತ್ರ ಹವನ ಪೂರ್ಣಾಹುತಿ, ಮಹಾಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಪ್ರತಿದಿವಸ ಸಂಜೆ 6.30 ರಿಂದ 8 ಗಂಟೆಯವರೆಗೆ ಸೇವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತರು ಪಾಲ್ಗೊಳಬೇಕು ಎಂದು ಶ್ರೀಗಳು‌ ನುಡಿದರು.

ನಂತರ ಶಿರಸಿ ಪತ್ರಿಕಾ ವರದಿಗಾರರಾಗಿ ಶ್ರೀಗಳು ಫಲಮಂತ್ರಾಕ್ಷತೆ ವಿತರಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್ ಹೆಗಡೆ ಬೊಮ್ನಳ್ಳಿ, ವ್ಯವಸ್ಥಾಪಕ ಎಸ್.ಎನ್ ಗಾಂವಕರ ಬೆಳ್ಳಿಪಾಲ್, ಶ್ರೀಗಳ ಆಪ್ತ ಕಾರ್ಯದರ್ಶಿ ಸಿಂಧೂರ್ ಭಟ್ ಇದ್ದರು.