ಕಲಾವಿದ ಮುರಳಿಧರ ಅನಂತ ಕುಟುಂಬಕ್ಕೆ ಕಲಾರಾಮ ಕಲ್ಚರಲ್ ಫೌಂಡೇಷನ್ ನಿಂದ ಧನ ಸಹಾಯ

ಯಲ್ಲಾಪುರ: ಇತ್ತೀಚೆಗೆ ನಿಧನರಾದ ತಾಲೂಕಿನ ಹಲಸಖಂಡದ ಹಿರಿಯ ಕಲಾವಿದ ಮುರಳಿಧರ ಅನಂತ ಅವರ ಕುಟುಂಬಕ್ಕೆ ಕವಾಳೆಯ ಕಲಾರಾಮ ಕಲ್ಚರಲ್ ಫೌಂಡೇಷನ್ ನಿಂದ 25,000 ರೂ. ಧನ ಸಹಾಯ ಮಾಡಲಾಯಿತು.

ಮುರಳಿಧರ ಅವರ ಪುತ್ರ ಅನಂತ ಯಲ್ಲಾಪುರ ಅವರಿಗೆ ಫೌಂಡೇಷನ್ ಅಧ್ಯಕ್ಷ ಗಣಪತಿ ಭಾಗ್ವತ ಕವಾಳೆ ಚೆಕ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ಕವಾಳೆ ರಾಮಚಂದ್ರ ಭಾಗ್ವತ ಹಾಗೂ ಮುರುಳಿಧರ ಅವರ ಒಡನಾಟವನ್ನು ಮೆಲುಕು ಹಾಕಿದರು. ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳು, ಸಮಾಜಮುಖಿ ಕಾರ್ಯ ಮಾಡುವವರು, ಬಡ ಕಲಾವಿದರಿಗೆ ನೆರವು ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಲಾರಾಮ ಕಲ್ಚರಲ್ ಫೌಂಡೇಷನ್ ನ ಚಂದ್ರಶೇಖರ ಭಟ್ಟ, ಎನ್.ಎಸ್.ಭಟ್ಟ ನಂದೊಳ್ಳಿ, ರಮೇಶ ಭಾಗ್ವತ, ನರಸಿಂಹ ಭಾಗ್ವತ ಗುಂಡ್ಕಲ್, ಗಣೇಶ ಗುಂಡ್ಕಲ್ ಹಾಗೂ ಇತರರಿದ್ದರು.