ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಪಶ್ಚಿಮ ಘಟ್ಟ ರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ್

ಗೋಕರ್ಣ: ಪಶ್ಚಿಮ ಘಟ್ಟ ರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಸೋಮವಾರ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ವೇ. ಮಹಾಬಲ ಉಪಾಧ್ಯ ಪೂಜಾ ಕೈಂಕರ್ಯ ನೇರವೇರಿಸಿ ಮಂದಿರದ ವತಿಯಿಂದ ಗೌರವಿಸಿ ಪ್ರಸಾದ ನೀಡಿದರು. ಇದಕ್ಕೂ ಮೊದಲು ಮಹಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ವೇಳೆ ಬಿ.ಜೆ.ಪಿ. ಪಕ್ಷದ ಕುಮಟಾ ಮಂಡಳ ಮಾಜಿ ಅಧ್ಯಕ್ಷ ಕುಮಾರ ಮಾರ್ಕಾಂಡೆ, ಗ್ರಾಂ ಪಂ. ಅಧ್ಯಕ್ಷ ಮಂಜುನಾಥ ಜನ್ನು, ಸುಜಯ ಶೆಟ್ಟಿ, ಗಣಪತಿ ನಾಯ್ಕ, ರಾಜೇಶ ಭಂಡಾರಿ, ಮೂರ್ತಿ ಭಟ್, ಭಟ್ಕಳ ಮಂಡಲದ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಮತ್ತಿರರು ಉಪಸ್ಥಿತರಿದ್ದರು.