ಬೆಳಗಾವಿಯಲ್ಲೊಂದು ಭೀಕರ ಮರ್ಡರ್.! ಬೈಕ್ ಮೇಲೆ ಹೊರಟ್ಟಿದ್ದ ವ್ಯಕ್ತಿಯ ರುಂಡ ಚೆಂಡಾಡಿದ ಹಂತಕರು.!

ಬೆಳಗಾವಿ: ಬೈಕ್ ಮೇಲೆ ಹೊರಟ್ಟಿದ್ದ ವ್ಯಕ್ತಿಯ ರುಂಡವನ್ನು ಚೆಂಡಾಡಿ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ತಾಲೂಕಿನ ಹಲಗಾ ಗ್ರಾಮದ ರಸ್ತೆಯ ಪಕ್ಕ ನಡೆದಿದೆ.

ಸವದತ್ತಿ ತಾಲೂಕಿನ ಮುನ್ನವಳ್ಳಿ ಗ್ರಾಮದ ಗದಗಯ್ಯ ಹಿರೇಮಠ ಕೊಲೆಯಾದ ವ್ಯಕ್ತಿ. ಬೈಕ್ ಮೇಲೆ ಹೊರಟಿದ್ದಾಗ ಅಪರಿಚಿತರು ವ್ಯಕ್ತಿಯ ರುಂಡವನ್ನು ಕತ್ತರಿಸಿ ಪರಾರಿಯಾಗಿದ್ದಾರೆ. ಮೃತದೇಹ ಬೈಕ್ ಮೇಲೆಯೇ ಬಿದ್ದಿದ್ದು ಘಟನೆಯನ್ನು ಗಮನಿಸಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.‌ ಸ್ಥಳಕ್ಕೆ ಹಿರೇಮಠ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.