
ಬೆಂಗಳೂರು (ಆ 08): ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರ್ತಿದೆ. ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆಯಲ್ಲೂ ಸಡಗರದಿಂದ ಹಬ್ಬವನ್ನ ಆಚರಿಸುತ್ತಾರೆ. ಮನೆಯಲ್ಲಿ ಮಹಾಲಕ್ಷ್ಮಿಯ ಪ್ರತಿಷ್ಠಾಪಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸುತ್ತಾರೆ. ಇಂದು ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಮಾರ್ಕೆಟ್ ನಲ್ಲಿ ಖರೀದಿ ಭರಾಟೆ ಜೋರಾಗಿದೆ. ಹಣ್ಣು, ಹೂವು ಖರೀದಿಗೆಂದು ಜನರು ಮುಗಿಬಿದ್ದಿದ್ದಾರೆ.
ಹಬ್ಬದ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. ನಗರದ ಕೆ ಆರ್ ಮಾರ್ಕೆಟ್ನಲ್ಲಿ ಜನಸಾಗರ ಉಂಟಾಗಿದ್ದು, ಹಣ್ಣು, ಹೂವು ಖರೀದಿಯಲ್ಲಿ ಜನರು ಬ್ಯುಸಿ ಆಗಿದ್ದಾರೆ. ಹಬ್ಬದ ದಿನವೂ ಮಾರ್ಕೆಟ್ನಲ್ಲಿ ಸಾವಿರಾರು ಜನರು ಸೇರಿದ್ದಾರೆ. ಮೈಸೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.


