ಹೊನ್ನಾವರದಲ್ಲಿ ಎನ್‌.ಎಚ್‌.ಎ.ಐ ನಿಂದ ಗೂಡಂಗಡಿ ತೆರವು

ಹೊನ್ನಾವರ : ಪಟ್ಟಣದ ಕಾಲೇಜ್‌ ಸರ್ಕಲ್‌ ಹತ್ತಿರ ಹಾಗೂ ರಾಮೇಶ್ವರಂ ಕೆಫೆ ಹೊಟೇಲ್‌ ಮುಂಭಾಗದ ಗೂಡಂಗಡಿಗಳನ್ನು ತೆರವು ಗೊಳಿಸಲಾಯಿತು. ಎನ್‌.ಎಚ್‌.ಎ.ಐ ನಿಂದ ತೆರವು ಕಾರ್ಯಾಚರಣೆ ನಡೆಯಿತು.ತೆರವು ಕಾರ್ಯಾಚರಣೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಇನ್ನು ಕೆಲವು ಗೂಡಂಗಡಿಕಾರರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ತೆರವು ಗೊಳಿಸಿದ್ರು.

ಗೂಡಂಗಡಿಕಾರರಿಂದ ಪ್ರತಿದಿನವೂ ಪ.ಪಂಚಾಯತ್‌ಅವರು ಜಾಗದ ಬಾಡಿಗೆಯನ್ನು ಪಡೆಯುತ್ತಿದ್ದರು ಎಂದು ಅಂಗಡಿಕಾರರು ತಿಳಿಸಿದರು.