ಮೇಲ್ಛಾವಣಿ ಕುಸಿದು ವೃದ್ಧೆಯ ಮನೆ ನೆಲಸಮ.! ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ.!

ರಾಯಚೂರು: ಕಳೆದ ಎರಡು ದಿನಗಳ ಜಿಟಿಜಿಟಿ ಮಳೆಗೆ ಮನೆ ಕುಸಿದುಬಿದ್ದು ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ದೇವದುರ್ಗ ತಾಲೂಕಿನ ಕೋಣಚಪ್ಪಳಿಯಲ್ಲಿ ವೃದ್ದೆ ನಾಗಮ್ಮ ಎನ್ನುವವರಿಗೆ ಸೇರಿದ ಮನೆ ಕುಸಿತವಾಗಿದೆ.

ನಿರಂತರ ಮಳೆಗೆ ಮನೆ ಮೇಲ್ಛಾವಣಿ ಶಿಥಿಲಗೊಂಡಿತ್ತು. ದನಕರುಗಳನ್ನ ಓಡಿಸಲು ವೃದ್ಧೆ ನಾಗಮ್ಮ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಏಕಾಏಕಿ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಬಟ್ಟೆ,ಹಾಗೂ ಅನೇಕ ಸಾಮಗ್ರಿಗಳು ನೀರಿನಲ್ಲಿ ನೆನೆದು ಹಾನಿಯಾಗಿವೆ. ಘಟನೆ ನಡೆದು ದಿನ ಕಳೆದರೂ ಈ ವರೆಗೆ ಅಧಿಕಾರಿಗಳು ಭೇಟಿ ನೀಡಿಲ್ಲ. ಬೀದಿಗೆ ಬಿದ್ದಿದ್ದೇವೆ, ಪರಿಹಾರ ಕೊಡಿ ಅಂತ ವೃದ್ಧೆ ಅಳಲು ತೋಡಿಕೊಂಡಿದ್ದಾಳೆ.