ಬುದ್ಧಿಮಾಂದ್ಯ ಮಕ್ಕಳ ಹಾಗೂ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಚಾದರ ವಿತರಣೆ

ಯಲ್ಲಾಪುರ: ಸೈ೦ಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಫ್ ಸೊಸೈಟಿ ಯಲ್ಲಾಪುರ ಶಾಖೆಯಿಂದ ರಾಘವೇಂದ್ರ ಬುದ್ದಿಮಾಂದ್ಯ ಮಕ್ಕಳ ಹಾಗೂ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೊಲ್ಲಾಪುರ್ ಚಾದರ ವಿತರಿಸಲಾಯಿತು.

ಶಾಖೆಯ ಅಧ್ಯಕ್ಷ ದಾಸಿಂತ್ ಫರ್ನಾಂಡಿಸ್ ಮಾತನಾಡಿ, ಸೊಸೈಟಿಯು ರಾಜ್ಯಾದ್ಯಂತ 111 ಶಾಖೆಗಳನ್ನ ಹೊಂದಿದ್ದು, ಸಹಕಾರಿ ಕಾರ್ಯವ್ಯಾಪ್ತಿಯ 3 ಸಾವಿರ ಅಂಗವಿಕಲ ಮಕ್ಕಳಿಗೆ ಚಾದರ ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಚಂದ್ರು, ಶಾಖಾ ವ್ಯವಸ್ಥಾಪಕ ಅಭಿಷೇಕ್ ತಡಸ, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.