ಭಟ್ಕಳ ಶಹರ ಪೋಲಿಸರಿಂದ ಸಂಶುದ್ದೀನ್ ಸರ್ಕಲ್ ನಲ್ಲಿ ಟ್ರಾಪಿಕ್ ಚೌಕಿ ಉದ್ಘಾಟನೆ

ಭಟ್ಕಳ: ಸಂಶುದ್ದೀನ್ ಸರ್ಕಲ್ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನೂಕೂಲವಾಗುವ ಹಿನ್ನೆಲೆ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಟ್ರಾಫಿಕ್ ಚೌಕಿಯನ್ನು ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಭಟ್ಕಳದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಹೆಚ್ಚಳದ ಹಿನ್ನೆಲೆ ಪೋಲಿಸರಿಗೂ ನಿಯಂತ್ರಣಕ್ಕೆ ಕಷ್ಟಕರವಾಗಿತ್ತು. ಮಳೆ‌, ಗಾಳಿ, ಬಿಸಿಲು ಚಳಿಯೆನ್ನದೇ ಟ್ರಾಫಿಕ್ ನಿಯಂತ್ರಣದ ಕೆಲಸಕ್ಕೆ ಒಂದು ಟ್ರಾಫಿಕ್ ಚೌಕಿಯ ಅವಶ್ಯಕತೆಯನ್ನು ಅರಿತು ಶಹರ ಠಾಣೆಯಿಂದ ಚೌಕಿ ನಿರ್ಮಿಸಲಾಗಿದೆ. ಇನ್ನು ಹೆದ್ದಾರಿ ಕಾಮಗಾರಿ ನಡೆಯಿತ್ತಿರುವ ಹಿನ್ನೆಲೆ ಟ್ರಾಫಿಕ್ ಕಂಟ್ರೋಲಗೆ ಪೋಲಿಸ್ ಸಿಬ್ಬಂದಿಗೆ ನಿಲ್ಲಲು ಸಮಸ್ಯೆಯಾಗುತ್ತಿತ್ತು ಈಗ ಪೋಲಿಸ್ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದರು.

ಶಹರ ಠಾಣಾ ಪೋಲೀಸ್ ವೃತ್ತ ನಿರೀಕ್ಷಕ ದಿವಾಕರ ಪಿ.ಎಮ್. ಮಾತನಾಡಿ ಸಂಶುದ್ದೀನ್ ಸರ್ಕಲ್ ಭಾಗದಲ್ಲಿ ಹಾಗೂ ಭಟ್ಕಳದ ಹೃದಯ ಭಾಗದಲ್ಲಿ ವಾಹನ ಸವಾರರು ಟ್ರಾಫಿಕ್ ಕಾನೂನು ಪಾಲನೆ ಮಾಡಬೇಕೆಂಬ ನಿಟ್ಟಿನಲ್ಲಿ ಪೋಲಿಸ್ ಟ್ರಾಫಿಕ್ ಚೌಕಿ ಆಲೋಚನೆ ಮಾಡಿದ್ದೇವೆ. ವಾಹನ ಸವಾರರಿಗೂ ಸಹ ಪೋಲಿಸ ನಿಯೋಜನೆಯೂ ಇರುವ ಭಯವಿದ್ದರೆ ರಸ್ತೆ ಸಂಚಾರವು ಸಮರ್ಪಕವಾಗಲಿದೆ. ಕಳೆದ ತಿಂಗಳು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಭಟ್ಕಳದಲ್ಲಿ ನಡೆಸಿದ ಜನ ಸಂಪರ್ಕ ಸಭೆಯಲ್ಲಿ ಜನರಿಂದ ಬಂದ ಬೇಡಿಕೆಯಂತೆ ಮೊದಲ ಹಂತವಾಗಿ ಚೌಕಿ ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮೀಣ ಪೊಲೀಸ್ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ, ನಗರ ಠಾಣೆ ಪಿಎಸ್ಐಗಳಾದ ಹೆಚ್.ಕುಡಗುಂಟಿ, ಸುಮಾ ಬಿ., ಗ್ರಾಮೀಣ ಠಾಣೆ ಪಿಎಸ್ಐ ಭರತಕುಮಾರ ಹಾಗೂ ಪೋಲಿಸ್ ಸಿಬ್ಬಂದಿಗಳು, ನೂರಾರು ಸಾರ್ವಜನಿಕರು ಇದ್ದರು.