
ದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಯಶಸ್ಸಿಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಬಸವರಾಜ ಬೊಮ್ಮಾಯಿ, ದೆಹಲಿ ನಗರದ ನಿವಾಸಿಗಳಲ್ಲಿ ಬಡವರು, ಕಡಿಮೆ ಆದಾಯ ಇರುವವರು, ಮಧ್ಯಮವರ್ಗದವರು, ವ್ಯಾಪಾರಸ್ಥರು ಸೇರಿದಂತೆ ನಗರದ ಹೊರಭಾಗಗಳಲ್ಲಿ ವಾಸವಾಗಿರುವ ಜನ ಮತ್ತು ಗ್ರಾಮೀಣ ಭಾಗದ ರೈತರು ಬಿಜೆಪಿ ಪರ ವೋಟ್ ಮಾಡಿ ಗೆಲ್ಲಿಸಿದ್ದಾರೆ, ಇವರ ಜೊತೆ ಪೂರ್ವಾಂಚಲದಿಂದ ಬಂದು ದೆಹಲಿಯಲ್ಲಿ ನೆಲೆಸಿರುವ ವಲಸೆಗಾಗರರು ಸಹ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳಿದರು. ಮುಸಲ್ಮಾನರು ಶೇಕಡ 20ಕ್ಕಿಂತ ಹೆಚ್ಚಿರುವ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ, ಅದರ ಅರ್ಥ ಈ ಸಮುದಾಯದವರೂ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳಿದರು.



