ಶಿರೂರು ಶೋಧ ಕಾರ್ಯಾಚರಣೆ; ಕೇರಳ ಮೂಲದ ಲಾರಿ,ಅರ್ಜುನ್ ಶವ ಪತ್ತೆ

ಶಿರೂರು: ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ, ಅರ್ಜುನ್ ಶವ ಪತ್ತೆಯಾಗಿದೆ.ಲಾರಿಯಲ್ಲೇ  ಅರ್ಜುನ್ ಶವ ಕೂಡ ದೊರೆತಿದೆ.

ಎರಡೂವರೇ ತಿಂಗಳ ಬಳಿಕ ಲಾರಿ, ಚಾಲಕನ ಶವ ಪತ್ತೆಯಾಗಿದೆ. ಶಿರೂರಿನಲ್ಲಿ ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗಿತ್ತು

ನದಿಯಲ್ಲಿ ಕಾರ್ಯಾಚರಣೆ ವೇಳೆ ಅರ್ಜುನ್ ಹಾಗೂ ಲಾರಿ ಇಂದು  ಪತ್ತೆಯಾಗಿದೆ. ಗುಡ್ಡಕುಸಿತದಲ್ಲಿ ಸಿಕ್ಕು ಸಂಪೂರ್ಣ ನುಜ್ಜುಗುಜ್ಜಾಗಿರುವ ಲಾರಿ.