ಹೊನ್ನಾವರದ ಬಾಂದೇಹಳ್ಳದಲ್ಲಿ ಮನೆಗೆ ಹೊತ್ತಿಕೊಂಡ ಬೆಂಕಿ- ಚರ್ಚ್‌ಗೆ ಹೋಗಿ ಬರುವಷ್ಟರಲ್ಲಿ ಯಾಕಿಂಗಾಯ್ತು?

ಹೊನ್ನಾವರ ಆ. 30 : ಹೊನ್ನಾವರದ ಬಾಂದೇಹಳ್ಳದ ಶಾಂತಿನಗರದಲ್ಲಿ ಆಕಸ್ಮಿಕ ತಗುಲಿದ ಬೆಂಕಿಯಿಂದ ಮನೆಯೊಂದು ಹೊತ್ತಿಯುರಿದ ಘಟನೆ ನಡೆದಿದೆ..

ಶಾಂತಿನಗರದ ಬಾಂದೇಹಳ್ಳದ ನಿವಾಸಿಯಾಗಿರುವ ಜ್ಯೋತಿ ಮಾರ್ಟಿನ್ ಜೋನ್ಸಾಲಿಸ್ ಎಂಬುವರ ಮನೆ ಇದಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಜ್ಯೋತಿ ಮಾರ್ಟಿನ್‌ ಜೋನ್ಸಾಲಿಸ್‌ ಪಟ್ಟಣದ ಎಂಪಿಇ ಸೊಸೈಟಿಯ ಸಿಬಿಎಸ್‌ಸಿ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



ಇನ್ನು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಪ್ರತಿದಿನ ಎಂದಿನಂತೆ ಶಾಲೆಗೆ ಹೋಗಿ ಬಂದು ಬಳಿಕ ಚರ್ಚ್‌ಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಿ ಬರುತ್ತಿದ್ದರು. ಇಂದು ಕೂಡ ಚರ್ಚ್‌ಗೆ ಹೋಗುವ ವೇಳೆ ಏಕಾಏಕಿ ಕಾಣಿಸಿಕೊಂಡ ಸಣ್ಣ ಪ್ರಮಾಣದ ಬೆಂಕಿ ಈಡೀ ಮನೆಗೆ ಆವರಿಸಿಕೊಂಡಿದೆ. ಮನೆ ಹೊತ್ತಿಯುರಿಯುತ್ತಿದ್ದನ್ನು ಕಂಡು ಜ್ಯೋತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಸಿದ್ದಾರೆ..

ಇನ್ನೂ ಬೆಂಕಿಗಾಹುತಿಯಾದ ಮನೆಯನ್ನು ಕಂಡು ಅಕ್ಕ ಪಕ್ಕದ ಮನೆಯವರು ಆತಂಕಗೊಂಡಿದ್ದಾರೆ. ಇನ್ನೂ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳ ಹಾಗೂ ಹೊನ್ನಾವರ ಪೋಲಿಸರು ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.