ಭಾರಿ ಗಾಳಿ-ಮಳೆಗೆ ತಲೆ ಮೇಲೆ ಬಿದ್ದ ಮರ; ಮಹಿಳೆ ಸೇರಿ ಜಾನುವಾರುಗಳು ಮೃತ್ಯು

ಉಡುಪಿ: ಭಾರಿ ಗಾಳಿ- ಮಳೆಗೆ ಮಹಿಳೆ ಮತ್ತು 2 ಹಸುಗಳು ದಾರುಣವಾಗಿ ಮೃತಪಟ್ಟಿವೆ. ಉಡುಪಿಯ ಕುಂದಾಪುರ ತಾಲೂಕು ಕೆಂಚನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಸುಜಾತ ಆಚಾರ್ತಿ (53) ಮೃತ ದುರ್ದೈವಿಗಳು.

ಸುಜಾತ ಹಸುಗಳನ್ನು ಮನೆಯ ಪಕ್ಕದಲ್ಲೇ ಇದ್ದ ಮರಕ್ಕೆ ಕಟ್ಟಿದ್ದರು. ಮುಂಜಾನೆಯಿಂದ ಕುಂದಾಪುರ ತಾಲೂಕಿನಲ್ಲಿ ಭಾರಿ ಗಾಳಿ ಮಳೆ ಹಿನ್ನೆಲೆಯಲ್ಲಿ ಹಸುವನ್ನು ಬಿಡಿಸಲು ಹೋಗಿದ್ದಾರೆ. ಈ ವೇಳೆ ಮರ ಮುರಿದು ಬಿದ್ದಿದೆ. ಏಕಾಏಕಿ ಮರ ಬಿದ್ದ ಪರಿಣಾಮ ಮರದಡಿಗೆ ಸಿಲುಕಿ ಸುಜಾತ ಗಂಭೀರ ಗಾಯಗೊಂಡಿದ್ದರು. ಎರಡು ಹಸುಗಳ ಮೇಲೆ ರಭಸವಾಗಿ ಮರ ಬಿದ್ದ ಕಾರಣಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದವು.

ಸ್ಥಳೀಯರ ನೆರವಿನಿಂದ ಮರದಡಿ ಸಿಲುಕಿದ್ದ ಸುಜಾತ ಮತ್ತು ಹಸುಗಳನ್ನು ಮೇಲೆತ್ತಲಾಯಿತು. ಆದರೆ ಮರ ತಲೆಗೆ ನೇರವಾಗಿ ಬಿದ್ದಿದ್ದರಿಂದ ಸುಜಾತ ಸೇರಿ ಜಾನುವಾರುಗಳು ಜೀವ ಬಿಟ್ಟಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.