ಶಿರೂರು ಬಳಿ ಗುಡ್ಡ ಕುಸಿತ: ಮಣ್ಣಿನಡಿ ಬೆಂಜ್ ​ಕಾರಿನ ಲೊಕೇಶನ್ ಪತ್ತೆ, ಮತ್ತಷ್ಟು ಹೆಚ್ಚಿಸಿದ ಆತಂಕ

ಉತ್ತರ ಕನ್ನಡ, ಜುಲೈ 17: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ   ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಣ್ಣಿನಡಿಯಲ್ಲಿ ಸಿಲುಕಿರುವ ಬೆಂಜ್ ​ಕಾರಿನ   ಲೊಕೇಶನ್​ ಅನ್ನು ತಜ್ಞರು ಪತ್ತೆ ಹಚ್ಚಿದ್ದಾರೆ. ತಜ್ಞರ ಮಾಹಿತಿಯಂತೆ ಬೆಂಜ್​ ಕಾರಿನ ಲೊಕೇಶನ್​ ಪತ್ತೆ ಆಗಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಆ ಮೂಲಕ ಮಣ್ಣಿನಡಿಯಲ್ಲಿ ಬೆಂಜ್ ಕಾರ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಕೇವಲ ಶೇ.30ರಷ್ಟು ಮಣ್ಣು ತೆರವುಗೊಳಿಸಲಾಗಿದೆ. ಇನ್ನೂ ಶೇಕಡಾ 70ರಷ್ಟು ಮಣ್ಣು ತೆರವು ಕಾರ್ಯ ಮಾಡಬೇಕಿದೆ..

ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾದ ಗಂಗಾವಳಿ ನದಿಯಲ್ಲಿನ ಗ್ಯಾಸ್ ಟ್ಯಾಂಕರ್

ಒಂದು ಕಡೆ ಮಣ್ಣು ತೆರವು ಕಾರ್ಯಾಚರಣೆಗೆ ಗುಡ್ಡ ಕುಸಿತದ ಆತಂಕ ಎದುರಾಗಿದ್ದು, ಇನ್ನೊಂದು ಕಡೆ ಗಂಗಾವಳಿ ನದಿಯಲ್ಲಿ ಬಿದ್ದಿರುವ ಗ್ಯಾಸ್ ಟ್ಯಾಂಕರ್ ಆತಂಕ ಸೃಷ್ಟಿಸಿದೆ. ಗ್ಯಾಸ ಟ್ಯಾಂಕರ್ ಸದ್ಯಕ್ಕೆ ಗ್ಯಾಸ್ ರಿಲಿಸ್ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ ಟ್ಯಾಂಕರ ಮುಂದೆ ಕೊಚ್ಚಿ ಹೋಗಿ ಬಂಡೆಗೆ ಅಪ್ಪಳಿಸುವ ಆತಂಕ ಎದುರಾಗಿದೆ.

ನಿನ್ನೆ ನದಿಯ ರಭಸಕ್ಕೆ ಟ್ಯಾಂಕರ್​ ಶಿರೂರದಿಂದ ಸಗಡಗೆರೆ ಗ್ರಾಮದ ಬಳಿ ಸುಮಾರು 6 ಕಿ.ಮೀ ಹರಿದು ಬಂದಿದೆ. ಸದ್ಯಕ್ಕೆ ಒಂದು ಕಡೆ ಸಿಲುಕಿಕೊಂಡ್ರೆ ಅಲ್ಲಿಂದ ಯಾವಾಗ ಬೇರೆ ಕಡೆ ಹೋಗುತ್ತೆ ಗೊತ್ತಿಲ್ಲ. ಇದೀಗ ಎನ್​ಡಿಆರ್​ಎಫ್​ ತಂಡ ಟ್ಯಾಂಕರ್ ಕಟ್ಟಿ ಹಾಕುತ್ತಿದೆ. ಸ್ಥಳದಲ್ಲಿ ಕುಮಟಾ ಎಸಿ ಕಲ್ಯಾಣಿ ಕಾಂಬ್ಳೆ ಹಾಗೂ ಕುಮಟಾ ಎಇಒ ಸುನೀಲ ಸೇರಿದಂತೆ ಆಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ.