ಕದ್ರಾ ಆಣೆಕಟ್ಟಿನಿಂದ 10ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕಾರವಾರ ಜುಲೈ 05: ಕರಾವಳಿಯಲ್ಲಿ ಸತತ ಮಳೆ ಬೀಳುತ್ತಿದೆ. ಕದ್ರಾ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಅಣೆಕಟ್ಟು ಭರ್ತಿಯಾಗುವ ಹಂತ ತಲುಪಿದ್ದು, ಪ್ರವಾಹ ತಪ್ಪಿಸಲು ಇಂದು ಕದ್ರಾ ಅಣೆಕಟ್ಟಿನ 4 ಕ್ರಸ್ಟಗೇಟ್ ತೆರೆದು 10 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.

ಇದರಿಂದ ನದಿ ದಂಡೆಯ ಜನರು ಸ್ಥಳಾಂತರ ತಪ್ಪಿದೆ. ಅಲ್ಲದೆ ಅಣೆಕಟ್ಟಿನಲ್ಲಿ ಅಪಾಯದ ಮಟ್ಟ ದಾಟದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.