ಶಿರಸಿ : ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ 25ಕ್ಕೂ ಹೆಚ್ಚು ಕಾರ್ಯಕರ್ತರು

ಶಿರಸಿ, ಏಪ್ರಿಲ್‌, 27 : ತಾಲೂಕಿನ ಅಂಡಗಿ ಶಕ್ತಿ ಕೇಂದ್ರದಲ್ಲಿ 25ಕ್ಕೂ ಹೆಚ್ಚುಕಾರ್ಯಕರ್ತರು ಕಾಂಗ್ರೆಸ್ ತೊರೆದು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸಂತೋಷ್ ಗೌಡ, ಮಲ್ಲಿಕಾರ್ಜುನ ಗೌಡ, ಶಿವಾ ನಾಯ್ಕ್, ಮಂಜುನಾಥ್ ನಾಯ್ಕ್, ಪ್ರವೀಣ್ ವಡ್ಡರ, ಹನುಮಂತ್ ಮಾದರ, ಸಂದೀಪ್ ನಾಯ್ಕ್, ಶಶಿಧರ್ ಮಾದರ, ಗಿರೀಶ್ ಮಾದರ, ಶಶಿಧರ್ ನಾಯ್ಕ್, ಅಣ್ಣಪ್ಪ ಮಾದರ, ಅರುಣ ಮಾದರ, ಸೋಮಶೇಖರ್ ಮಾದರ, ಸಂದೀಪ್ ಚೆನ್ನಯ್ಯ, ಅಬ್ಬಾಸ್ ಸಾಬ್, ನವೀನ್ ನಾಯ್ಕ್, ಶರತ್ ನಾಯ್ಕ್, ಭೀಮಪ್ಪ ಹರಿಜನ, ಮಹೇಶ್ ವಡ್ಡರ, ಸಿದ್ದೇಶ್ ಕುರುಬರ, ಸಲ್ಮಾನ್ ಸಾಬ್ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ್ ನಾಯ್ಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್ ನಾಯ್ಕ್, ಉಪಾಧ್ಯಕ್ಷ ಪ್ರಶಾಂತ್ ನಾಯ್ಕ್, ಶಿರಸಿ ಗ್ರಾಮೀಣ ಮಂಡಲ ಕಾರ್ಯದರ್ಶಿ ಗಜೇಂದ್ರ ನಾಯ್ಕ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಯುವರಾಜ್ ಗೌಡ, ಎಸ್‌ಸಿ ಮೋರ್ಚಾದ ಈಶ್ವರ ಚೆನ್ನಯ್ಯ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಪಾಟೀಲ್, ಅಂಡಗಿ ಶಕ್ತಿ ಕೇಂದ್ರ ಅಧ್ಯಕ್ಷ ಗಣಪತಿ ಗೌಡ, ಪ್ರಧಾನ ಕಾರ್ಯದರ್ಶಿ ರವಿ ದೇವಾಡಿಗ ಉಪಸ್ಥಿತರಿದ್ದರು..