ಅಭಿವೃದ್ಧಿಗೆ ಬಿಜೆಪಿಯನ್ನು ಗೆಲ್ಲಿಸಿ : ರೂಪಾಲಿ ಎಸ್. ನಾಯ್ಕ

ಉತ್ತರ ಕನ್ನಡದ ಕ್ಷೇತ್ರದ ಉದ್ದಗಲಕ್ಕೂ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ರೂಪಾಲಿ ಎಸ್.ನಾಯ್ಕ, ಈಗ ಬೂತ್ ಮಟ್ಟದಲ್ಲೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಕಾರವಾರ, ಏಪ್ರಿಲ್‌ 24 : ದೇಶದ ಪ್ರಗತಿಗೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣ. ಕ್ಷೇತ್ರದ ಅಭಿವೃದ್ಧಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಗೆಲ್ಲಿಸೋಣ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಶ್ರೀಮತಿ ರೂಪಾಲಿ ಎಸ್.ನಾಯ್ಕ ವಿನಂತಿಸಿದರು.

ಅವರು ಬುಧವಾರ ಕಾರವಾರ ತಾಲೂಕಿನ ವಿವಿಧ ಬೂತ್ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.  ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶ್ವದಲ್ಲಿ ನಮ್ಮ ದೇಶದ ಶಕ್ತಿಯನ್ನು ತೋರಿಸಿದ್ದಾರೆ. ನಾವು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ  ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣ. ವಿಶ್ವದ ಅತೀ ಬಲಿಷ್ಠಶಕ್ತಿಯಾಗಿ  ಭಾರತ ಹೊರಹೊಮ್ಮುವಂತೆ ಮಾಡುತ್ತಿರುವ ನರೇಂದ್ರ ಮೋದಿ ಅವರ ಅವಿರತ ಶ್ರಮಕ್ಕೆ ಕ್ಷೇತ್ರದಲ್ಲಿ ಕಾಗೇರಿ ಅವರನ್ನು ಗೆಲ್ಲಿಸುವ ಮೂಲಕ ನಮ್ಮ ಕೊಡುಗೆ ನೀಡೋಣ ಎಂದು ಹೇಳಿದ್ರು.

ಚಿತ್ತಾಕುಲ ಮಹಾಶಕ್ತಿ ಕೇಂದ್ರದ ಚಿತ್ತಾಕುಲ ಗ್ರಾಮ ಪಂಚಾಯತಿಯ  ಬೂತ್ ಸಂಖ್ಯೆ 23,24,25,26,27,28,29,30,31,32,33,34,35,36ರಲ್ಲಿ ತಾರಿವಾಡ, ಕೊಂಕಣವಾಡ, ಮಡಿವಾಳಶಿಟ್ಟಾ, ದೇವಳವಾಡ, ನಾಕುದಾಮಶಿಟ್ಟಾ, ಸದಾಶಿವಗಡಕಿಲ್ಲಾ, ದೇವಬಾಗ, ಚಿಂಚೇವಾಡ, ಮಾಲದಾರವಾಡ, ಬೇತುನಾಯ್ಕವಾಡ, ನರಸಿಂಹಶಿಟ್ಟಾ, ಸೀಬರ್ಡಕಾಲನಿ, ಅರ್ಜುನ ಕೋಟ, ಕಣಸಗಿರಿಯಲ್ಲಿ ಪ್ರಚಾರ ನಡೆಸಿದರು.

ನಂತರ ಮಲ್ಲಾಪುರ ಮಹಾಶಕ್ತಿ ಕೇಂದ್ರದ ಘಾಡಸಾಯಿ ಗ್ರಾಮ ಪಂಚಾಯತಿಯ ಹಳಗಾ ಡೋಲನಲ್ಲಿ ಬೂತ್ ಸಂಖ್ಯೆ 38, 40, 48, 49, 50, 51 ರಲ್ಲಿ ಪ್ರಚಾರ ನಡೆಸಿದರು. ಸಂಜೆ ಚೆಂಡಿಯಾ ಮಹಾಶಕ್ತಿ ಕೇಂದ್ರದ ಶಿರವಾಡ ಗ್ರಾಮ ಪಂಚಾಯತಿಯ  ಬೂತ್ ಸಂಖ್ಯೆ 61,62,63,64 ಗಾಂವಕರವಾಡ, ದೇವತಿವಾಡ, ಶೇಜವಾಡ, ಮಖೇರಿಯಲ್ಲಿ  ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ,  ಗ್ರಾಮೀಣ ಕಾರ್ಯದರ್ಶಿ ಸೂರಜ ದೇಸಾಯಿ, ವಿವಿಧ ಬೂತ್ ಗಳ ಅಧ್ಯಕ್ಷರು, ಬೂತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.