ಶಿರಸಿ : ಸಮಾಜ ಸೇವಕ ವಿಪಿ ಹೆಗಡೆ ವೈಶಾಲಿಯವರಿಗೆ ಸಪ್ತಕದಿಂದ ಸನ್ಮಾನ

ಶಿರಸಿಯ ಸಮಾಜ ಸೇವಕ ವಿಪಿ ಹೆಗಡೆಯವರಿಗೆ ಜಿಎಸ್‌ ಹೆಗಡೆ ನೇತೃತ್ವದ ಸಪ್ತಕ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಶಿರಸಿ, ಏಪ್ರಿಲ್‌ 14 : ವಿನಾಯಕ ಸಭಾಭವನದಲ್ಲಿ ಜಿಎಸ್‌ ಹೆಗಡೆ ನೇತೃತ್ವದ ಬೆಂಗಳೂರಿನ ಸಪ್ತಕ ಸಂಸ್ಥೆ ವತಿಯಿಂದ ಶಿರಸಿಯ ಪ್ರಸಿದ್ಧ ಸಮಾಜ ಸೇವೆಕ ವಿಪಿ ಹೆಗಡೆ ವೈಶಾಲಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಪಿ ಹೆಗಡೆ, ಸಪ್ತಕ ಸಂಸ್ಥೆ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಕೆಲಸ ಮಾಡುತ್ತಿದೆ. ಅವರ ನಿಸ್ವಾರ್ಥ ಮನೊಭಾವ ಸಾಧಕರ ಮೇಲಿನ ಜವಾಭ್ದಾರಿ ಹೆಚ್ಚಾಗುವಂತೆ ಮಾಡುತ್ತೆ. ಸಪ್ತಕ ಸಂಸ್ಥೆ ನೀಡಿದ ಪ್ರತಿ ಪೈಸೆಯೂ ಸಾರ್ಥಕವಾಗುವ ರೀತಿಯಲ್ಲಿ ವಿನಿಯೋಗಿಸುತ್ತೇನೆ ಎಂದು ಹೇಳಿದ್ರು..
ಬಳಿಕ ಸಪ್ತಕ ಸಂಸ್ಥೆಯ ಸಂಸ್ತಾಪಕರಾದ ಜಿ.ಎಸ್.ಹೆಗಡೆಯವರು ಮಾತನಾಡಿ, ಸಮಾಜಮುಖಿ ಕೆಲಸಗಳ ಮೂಲಕ ವಿಪಿ ಹೆಗಡೆಯವರು ಮಾದರಿ ವ್ಯಕ್ತಿಯಾಗಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ವಿಪಿ ಹೆಗಡೆಯವರನ್ನು ಸನ್ಮಾನಿಸಲು ಸಪ್ತಕ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ರು.

ಇನ್ನು ಅದೇ ದಿನ ಸಂಜೆ ನಡೆದ ಸಪ್ತಕದ “ಸಂಗೀತ ಸಂದ್ಯಾ ” ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜನಮನ ಸೂರೆಗೊಂಡಿತು..