ಜಾನಪದ ನೃತ್ಯ ಸ್ಪರ್ಧೆ, ಸನ್ಮಾನ : ಆಹ್ವಾನ

ಏಪ್ರಿಲ್ 14 ರಂದು ರವಿವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ‘ ಜ್ಞಾನಗಂಗಾ ‘ ವೇದಿಕೆ ಆಶ್ರಯದಲ್ಲಿ ಎಲ್ಲ ಸಮಾಜ ಬಾಂಧವರಿಗಾಗಿ ಜಾನಪದ ನೃತ್ಯ ಸ್ಪರ್ಧೆ ಹಾಗೂ ಸಮಾಜದ ಗಣ್ಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಂಘಟಕರಾದ ರವಿ ಮುಕ್ರಿ (ಮೊ.9483687368) ತಿಳಿಸಿದ್ದಾರೆ.