ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ನಾರಿ ಶಕ್ತಿ ವಂದನ್‌ ಕಾರ್ಯಕ್ರಮ ವೀಕ್ಷಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್.‌ ನಾಯ್ಕ


ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನಾರಿ ಶಕ್ತಿ ವಂದನ್‌ ಕಾರ್ಯಕ್ರಮದ ಅಂಗವಾಗಿ, ಕಾರವಾರದ ಬಿಜೆಪಿ ಕಾರ್ಯಾಲಯದಲ್ಲಿ ಪ್ರಾಜೆಕ್ಟರ್‌ ಮೂಲಕ ಕಾರವಾರ ನಗರ ಮತ್ತು ಗ್ರಾಮೀಣ ಮಂಡಲದ ಮಹಿಳಾ ಮೋರ್ಚಾದವರೊಂದಿಗೆ ರಾಜ್ಯ ಬಿಜೆಪಿ ಉಪಾದ್ಯಕ್ಷರಾದ ರೂಪಾಲಿ ಎಸ್.‌ ನಾಯ್ಕ ವೀಕ್ಷಿಸಿದ್ರು…

ಕಾರ್ಯಕ್ರಮಕ್ಕೂ ಮೊದಲು ಭಾರತಾಂಬೆ, ಶಾಮಪ್ರಸಾದ ಮುಖರ್ಜಿ ಮತ್ತು ದೀನದಯಾಳ ಉಪಾದ್ಯಾಯ ಅವರ ಭಾವ ಚಿತ್ರಕ್ಕೆ ರೂಪಾಲಿ ಎಸ್‌ ನಾಯ್ಕ ಅವರು ಪುಷ್ಪ ನಮನ ಸಲ್ಲಿಸಿದ್ರು…



ಈ ಸಂದರ್ಭದಲ್ಲಿ ಕಾರವಾರ ನಗರಮಂಡಲದ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲ‌ದ ಸುಭಾಷ ಗುನಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ‌ ಸುಜಾತಾ ಬಾಂದೇಕರ, ಮಹಿಳಾ ಮೋರ್ಚಾದ ಶ್ರೀಮತಿ ವೈಶಾಲಿ, ಶ್ರೀಮತಿ ಕಲ್ಪನಾ ನಾಯ್ಕ ಸೇರಿದಂತೆ ಮೊದಲಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು…