ಕಾಂಗ್ರೆಸ್‌ ನೀತಿಯನ್ನು ಖಂಡಿಸಿ ಹೊನ್ನಾವರ ಪಟ್ಟಣದಲ್ಲಿ ಬಿಜೆಪಿ ಯುವಮೋರ್ಚಾದಿಂದ ತಿರಂಗ ಯಾತ್ರೆ

ಹೊನ್ನಾವರ : ರಾಜ್ಯ ಕಾಂಗ್ರೆಸ್‌ ಸರ್ಕಾರದ ದೋರಣೆಗಳನ್ನು ಖಂಡಿಸಿ, ಬಿಜೆಪಿ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸುತ್ತಿದೆ. ಹೊನ್ನಾವರ ಪಟ್ಟಣದಲ್ಲೂ ಕೂಡ  ಜಿಲ್ಲಾ ಬಿಜೆಪಿ ಯುವಮೋರ್ಚಾದಿಂದ ತಿರಂಗ ಯಾತ್ರೆ ನಡೆಸಲಾಯ್ತು…

ಪಟ್ಟಣದ ಪಂಚಾಯತ್‌ನಿಂದ ಶರಾವತಿ ಸರ್ಕಲ್‌ವರೆಗೆ ಘೋಷಣೆಗಳನ್ನು ಕೂಗುತ್ತ ತಿರಂಗಾ ಯಾತ್ರೆ ನಡೆಸಿದ್ರು. ಈ ವೇಳೆ ನುಡಿಸಿರಿಯೊಂದಿಗೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ  ಪ್ರೇಮ್‌ ಕುಮಾರ್‌, ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದ್ದು, ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡ್ತಾ ಇದೆ. ಇದಕ್ಕೆ ವಿಧಾನಸಭೆಯಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದಿದ್ದೇ ನಿದರ್ಶನ. ಇದನ್ನು ವಿರೋಧಿಸಿ ತಿರಂಗ ಯಾತ್ರೆಯನ್ನು ನಾವು ದೇಶಾದ್ಯಂತ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ರು…

ಬಳಿಕ ಮಾತನಾಡಿದ ಹೊನ್ನಾವರ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್‌ ನಾಯ್ಕ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರ ನಡೆಯನ್ನು ನೋಡ್ತಾ ಇದ್ರೆ, ರಾಜ್ಯಕ್ಕೆ ಕುತ್ತನ್ನು ತರುವ ರೀತಿಯಲ್ಲಿ ಕಾಣ್ತಿದೆ. ಇದಕ್ಕೆ ಉಗ್ರ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ರು. ಈ ವೇಳೆ ಬಿಜೆಪಿ ಯುವ ಮೋರ್ಚಾದ ಸದಸ್ಯರು, ಬಿಜೆಪಿಯ ಪ್ರಮುಖರು ಮತ್ತು ಸಾರ್ವಜನಿಕರು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ರು…