ಅಂಕೋಲಾದಲ್ಲಿ ರೈಲು ಬಡಿದು ಯುವಕ ಸಾವು

ಅಂಕೋಲಾ: ರೈಲು ಬಡಿದು ಯುವಕನೋರ್ವ ಮೃತ ಪಟ್ಟ ಘಟನೆ ತಾಲೂಕಿನ ಹುಲಿದೇವರವಾಡದ ಟನಲ್ ಬಳಿ ಸಂಭವಿಸಿದೆ.
ಪಟ್ಟಣದ ಅಂಬಾರಕೊಡ್ಲಾದ ಗಣೇಶ ರಾಮಾ ಗೌಡ(25) ಮೃತರು. ಗಣೇಶ ಕಳೆದ ಒಂದು ವರ್ಷದಿಂದ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿ ಉಳಿದು ಅತಿಯಾಗಿ ಸಾರಾಯಿ ಸೇವನೆ ಮಾಡುತ್ತಿದ್ದ. ಸೋಮವಾರ ರಾತ್ರಿ ಸರಾಯಿ ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ತಾಯಿಯೊಂದಿಗೆ ಜಗಳ ಮಾಡಿಕೊಂಡು ಹೋಗಿದ್ದ. ಹುಲಿದೇವರವಾಡ ಟನಲ್ ಹತ್ತಿರ ಇರುವ ರೈಲ್ವೆ ಹಳಿಯ ಮೇಲೆ ಮುಂಜಾನೆ ಹೋಗುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಚಲಿಸುವ ರೈಲು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡವನಿಗೆ ರೈಲ್ವೆ ಇಲಾಖೆಯ ಸಿಬ್ಬಂದಿ ಚಿಕಿತ್ಸೆಗಾಗಿ ಅಂಕೋಲಾ ರೈಲ್ವೆ ನಿಲ್ದಾಣದ ಹತ್ತಿರ ಕರೆದುಕೊಂಡು ಬಂದಿದ್ದರು. ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್‌ನ ವೈದ್ಯಕೀಯ ಸಿಬ್ಬಂದಿಗಳು ಪರೀಕ್ಷಿಸಿ ಮೃತಪಟ್ಟ ಕುರಿತು ಖಚಿತಪಡಿಸಿದರು. ಈ ಕುರಿತು ಮೃತನ ಸಹೋದರ ದೂರದ ನೀಡಿದ್ದಾರೆ..